Advertisement

WCS ಹಿರಿಯ ಅಧಿಕಾರಿ ಕೆ.ಎಸ್.ಲೋಕೇಶ್ ನಿಧನ

07:39 PM Jul 07, 2023 | Team Udayavani |

ಹುಣಸೂರು: WCS(ವೈಲ್ಡ್ ಲೈಫ್ ಕನ್ಸರ್‌ವೈಸ್ ಸೊಸೈಟಿ)ಇಂಡಿಯಾದ ಹುಣಸೂರು ಕಚೇರಿಯ ಸೀನಿಯರ್ ಆಫಿಸರ್ ಆಗಿದ್ದ ಕೆ.ಎಸ್.ಲೋಕೇಶ್(54)ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.

Advertisement

ಮೂಲತಃ ಕೊಡಗಿನ ದುಬಾರೆ ಬಳಿಯ ರಂಗಸಮುದ್ರ ಗ್ರಾಮದವರಾಗಿರುವ ಲೋಕೇಶ್ ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಕುಸಿದು ಬಿದ್ದರು, ತತ್ ಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಿಲಾಯಿತಾದರು ಅದಾಗಲೇ ಮೃತಪಟ್ಟಿದ್ದರು. ನಾಗರಹೊಳೆ ಉದ್ಯಾನದಿಂದ ಆದಿವಾಸಿಗಳ 780ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಹುಣಸೂರು ತಾಲೂಕಿನ ವಿವಿದೆಡೆ ಪುನರ್ವಸತಿ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

WCSನ ನಿರ್ದೇಶಕಿ ವಿದ್ಯಾಅತ್ರೇಯ, ಪ್ರೊಗ್ರಾಮ್ ಹೆಡ್ ದೇವುಚರಣ್, ಆಡಳಿತಾಧಿಕಾರಿ ಮಂಗಳಗೌರಿ, ಎಸಿಎಫ್ ಸತೀಶ್, ಸಹೋದ್ಯೋಗಿಗಳಾದ ಪಿ.ಎಂ.ಮುತ್ತಣ್ಣ, ವಿನೋದ್‌ಕುಮಾರ್, ಪ್ರಕಾಶ್, ಗೋವಿಂದಪ್ಪ ಸೇರಿದಂತೆ ಅನೇಕ ಆದಿವಾಸಿ ಮುಖಂಡರು ಸ್ನೇಹಿತರು ಅಂತಿಮ ದರ್ಶನ ಪಡೆದರು. ನಿವೃತ್ತ ಸಿಸಿಎಫ್ ಬಾಲಚಂದರ್, ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಶುಕ್ರವಾರ ಸಂಜೆ ಸ್ವಗ್ರಾಮ ರಂಗ ಸಮುದ್ರದಲ್ಲಿ ಅಂತ್ಯಕ್ರಿಯೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next