Advertisement

ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ವಿಧಿವಶ

07:55 PM Sep 16, 2022 | Team Udayavani |

ಬೆಂಗಳೂರು: ಹಿರಿಯ ಪತ್ರಕರ್ತ ಕೆ ಸತ್ಯ ನಾರಾಯಣ ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.

Advertisement

1965 ರಿಂದ ನಾಡಿದ ವಿವಿಧ ಪತ್ರಿಕೆಗಳಲ್ಲಿ ಕರಡುಪಠಕರಾಗಿ, ಸಹ ಸಂಪಾದಕರಾಗಿ, ಸಹಾಯಕ ಸಂಪಾದಕರಾಗಿ ಕೆ ಸತ್ಯ ನಾರಾಯಣ ಸುದೀರ್ಘ ಸೇವೆ ಸಲ್ಲಿಸಿದ್ದರು.ಅವರು ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಪುತ್ರಿ ಮತ್ತು ಅಳಿಯ ಆಸ್ಟ್ರೇಲಿಯ ದಲ್ಲಿದ್ದು ನಾಳೆ ಸಂಜೆ ಹೊತ್ತಿಗೆ ಬೆಂಗಳೂರು ತಲುಪಲಿದ್ದಾರೆ.ಅಂತ್ಯ ಸಂಸ್ಕಾರವು ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next