Advertisement

ಹಿರಿಯ ನಾಗರಿಕರಿಗಿಲ್ಲ ಮಾದಪ್ಪನ ನೇರ ದರ್ಶನ

03:51 PM Jul 19, 2023 | Team Udayavani |

ಹನೂರು(ಚಾ.ನಗರ): ಹಿರಿಯ ನಾಗರಿಕರಿಗೆ ದೇವಾಲಯಗಳಲ್ಲಿ ನೇರ ದರ್ಶನ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರ ಆದೇಶಿಸಿದ್ದರೂ, ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ.

Advertisement

ಸರ್ಕಾರದ ಕಾಯ್ದೆಗಳು, ಆದೇಶಗಳು ಸಮರ್ಪಕವಾಗಿ ಜಾರಿಯಾಗದೆ ಕೇವಲ ಕಾಗದದ ಮೇಲೆ ಮಾತ್ರ ಉಳಿಯುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ. ಕಳೆದ ಸೋಮವಾರ ಭೀಮನ ಅಮಾವಾಸ್ಯೆ ದಿನದಂದು ಧರ್ಮ ದರ್ಶನದ ಸಾಲಿನಲ್ಲಿ ಸಾವಿರಾರು ಜನರು ಕ್ಯೂ ನಿಂತಿದ್ದರು. ಹಲವು ಹಿರಿಯ ನಾಗರಿಕರು ನೇರ ದರ್ಶನದ ಸರದಿ ಸಾಲನ್ನು ಹುಡುಕಿದರು. ಆದರೆ, ಹಿರಿಯ ನಾಗರಿಕರ ನೇರ ದರ್ಶನಕ್ಕೆ ಯಾವ ವ್ಯವಸ್ಥೆಯೂ ಇರಲಿಲ್ಲ. ಹಿರಿಯ ನಾಗರಿಕರು ದೇವಾಲಯದ ಸಿಬ್ಬಂದಿಯನ್ನು ಕೇಳಿದರೆ ಸರ್ಕಾರ ಮಾಡಿದೆ ಅಷ್ಟೇ, ನಮ್ಮಲ್ಲಿ ಇನ್ನೂ ವ್ಯವಸ್ಥೆ ಮಾಡಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿತು.

ಸರ್ಕಾರದ ಆದೇಶವೇನಿದೆ: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದೇವಾಲಯಗಳ ಎ ಮತ್ತು ಬಿ ಶ್ರೇಣಿಯ ಸಂಸ್ಥೆಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರ ದರ್ಶನ ಸೌಲಭ್ಯ ಕಲ್ಪಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಗುಲಗಳಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಕಷ್ಟವಾಗುತ್ತಿದೆ.

ನೇರ ದರ್ಶನ ಸೌಲಭ್ಯ ಕಲ್ಪಿಸಿ: ಈ ನಿಟ್ಟಿನಲ್ಲಿ 65 ವರ್ಷ ತುಂಬಿರುವ ಬಗ್ಗೆ ವಯಸ್ಸಿನ ದೃಢೀಕರಣ ಅಥವಾ ಆಧಾರ್‌ ಕಾರ್ಡ್‌ ತೋರಿದಲ್ಲಿ ನೇರ ದರ್ಶನ ಸೌಲಭ್ಯ ಕಲ್ಪಿಸಬೇಕು. ಸಾಧ್ಯವಾದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸಬೇಕು. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರವನ್ನು ತೆರೆದು, ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿ ನಿಯೋಜಿಸಿ ತ್ವರಿತ ದರ್ಶನಕ್ಕೆ ಕ್ರಮವಹಿಸಬೇಕು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ಜೂ.21 2023ರಂದು ಆದೇಶ ಹೊರಡಿಸಿದ್ದಾರೆ.

ಹಿರಿಯರ ಗೋಳು ಕೇಳುವವರ್ಯಾರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯ ಹಳೇ ಮೈಸೂರು ಭಾಗದ ಬಡವರು ಮತ್ತು ಮಧ್ಯಮ ವರ್ಗದವರ ಆರಾಧ್ಯದೈವ ಮಲೆ ಮಾದಪ್ಪ ನೆಲೆಯೂರಿದ ಪುಣ್ಯಕ್ಷೇತ್ರವಾಗಿದೆ. ಈ ಪುಣ್ಯ ಕ್ಷೇತ್ರಕ್ಕೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಆಗಮಿಸುತ್ತಿದ್ದಾರೆ.

Advertisement

ಆದೇಶ ಜಾರಿ ಪ್ರಾಧಿಕಾರದ ಕರ್ತವ್ಯ: ಅಮಾವಾಸ್ಯೆ, ಹುಣ್ಣಿಮೆ, ವಿಶೇಷದ ದಿನಗಳಲ್ಲಿ ದರ್ಶನಕ್ಕಾಗಿ ಧರ್ಮದರ್ಶನ ಸಾಲಿನಲ್ಲಿ ನಿಂತರೆ ಕನಿಷ್ಠ 6 ತಾಸಿನಿಂದ 8 ತಾಸು ಸಮಯಾವಕಾಶ ತಗುಲುತ್ತದೆ. ಹಿರಿಯ ನಾಗರಿಕರು, ಅದರಲ್ಲೂ ಕಾಯಿಲೆ ಉಳ್ಳವರು ಹೆಚ್ಚು ಹೊತ್ತು ನಿಲ್ಲಲಾಗದೇ ಬಸವಳಿಯುತ್ತಿದ್ದಾರೆ. ರಾಜ್ಯ ಸರ್ಕಾರ ತಂದಿರುವ ಆದೇಶವನ್ನು ಜಾರಿಗೊಳಿ ಸಬೇಕಾ ದುದು ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಆದರೆ, ಜಾರಿಯಲ್ಲಿ ವಿಳಂಬವಾಗುತ್ತಿದೆ.

ಪ್ರಾಧಿಕಾರ ಆದೇಶ ಪಾಲಿಸಲಿ: ಹಿರಿಯ ನಾಗರಿಕರಿಗೆ ನೇರ ದರ್ಶನ ವ್ಯವಸ್ಥೆಗಾಗಿ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗದ ಪ್ರವೇಶದ್ವಾರ 4ರಲ್ಲಿ ವ್ಯವಸ್ಥೆ ಮಾಡ ಲಾಗುತ್ತಿದೆ. ಓರ್ವ ಸಿಬ್ಬಂದಿಯನ್ನು ನೇಮಿಸಿ ವಯಸ್ಸಿನ ದೃಢೀಕರಣ ಪರಿಶೀಲಿಸಿ ಹಿರಿಯ ನಾಗರಿಕರಿಗೆ ನೇರ ದರ್ಶನ ವ್ಯವಸ್ಥೆ ಮಾಡುವುದಾಗಿ ಪ್ರಾಧಿಕಾರದ ನಿರ್ಗಮಿತ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಜೂ.23ರಂದು ಉದಯವಾಣಿ ಪತ್ರಿಕೆಗೆ ತಿಳಿಸಿದ್ದರು. ಆದರೆ, ಈ ಆದೇಶ ಇನ್ನೂ ಜಾರಿಗೆ ಬಂದಿಲ್ಲ.

ವಿಶೇಷ ದಿನಗಳಲ್ಲಿ ಸ್ವಾಮಿ ದರ್ಶನಕ್ಕೆ ಬಂದಾಗ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು. ಸರ್ಕಾರ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ನೇರ ದರ್ಶನಕ್ಕೆ ಆದೇಶ ನೀಡಿದೆ. ಈ ಆದೇಶವನ್ನು ಬೆಟ್ಟದಲ್ಲಿ ಜಾರಿಗೊಳಿಸಬೇಕು. ●ಸಾವಿತ್ರಮ್ಮ, ಹಿರಿಯ ನಾಗರಿಕರು. ಮಂಡ್ಯ.

ಹಿರಿಯ ನಾಗರಿಕರು, ದಿವ್ಯಾಂಗರು, ಗರ್ಣಿಣಿ ಮಹಿಳೆಯರು, ಮಗುವಿನ ಜೊತೆ ಬಂದಿರುವ ಮಹಿಳೆಯರನ್ನು 500ರೂ ದರ್ಶನದ ವಿಶೇಷ ದರ್ಶನ ಸಾಲಿನಲ್ಲಿ ನೇರವಾಗಿ ಬಿಡಲು ಸಿಬ್ಬಂದಿಗೆ ತಿಳಿಸಿ ಸೂಚನೆ ನೀಡಲಾಗಿದೆ. ಒಂದೊಮ್ಮೆ ಆ ರೀತಿ ಸಮಸ್ಯೆಯಾಗಿದ್ದಲ್ಲಿ 500 ರೂ. ವಿಶೇಷ ಪ್ರವೇಶ ದ್ವಾರದ ಬಳಿ ಬೋರ್ಡ್‌ ಹಾಕಲು ಕ್ರಮವಹಿಸಲಾಗುವುದು. 2 ಎಕರೆಯಲ್ಲಿದ್ದ ಜೋಳದ ●ಗೀತಾ ಹುಡೇದ, ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ ಕಾರ್ಯದರ್ಶಿ

-ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next