Advertisement

ಹಿರಿಯ ಕಲಾ‌ವಿದ ಗುರುಮೂರ್ತಿ ಇನ್ನಿಲ್ಲ

07:57 AM Aug 19, 2017 | |

ಬೆಂಗಳೂರು: ಕನ್ನಡಪರ ಹೋರಾಟಗಾರ ಹಾಗೂ ಕಲಾವಿದ ಟಿ.ವಿ. ಗುರುಮೂರ್ತಿ  ತೀವ್ರ ಹೃದಯಾಘಾತದಿಂದ ಶುಕ್ರವಾರ ರಾತ್ರಿ ಕನಕಪುರ ರಸ್ತೆಯ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 67ವರ್ಷ ವಯಸ್ಸಾಗಿತ್ತು.

Advertisement

ಶುಕ್ರವಾರ ಸಂಜೆ ಮನೆಯಲ್ಲಿರುವಾಗ ಹೃದಯಾಘಾತ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅಸ್ಪತ್ರೆಗೆ ಸಾಗಿಸಲಾಗಿತ್ತು, ಚಿಕಿತ್ಸೆ ಫ‌ಲಕಾರಿಯಾಗದೇ ಕೊನೆಯುಸಿರೆಳೆದರು.

ಮೂಲತ ತೂಮಕೂರಿನ ತಿಪಟೂರಿನವರಾದ ಗುರುಮೂರ್ತಿ ಅವರು, ಚಿತ್ರರಂಗದಲ್ಲಿ ಗುರುಮಾಮನೆಂದೇ ಜನಜನಜನಿತರಾಗಿದ್ದರು. ಮುಕ್ತ ಮುಕ್ತ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಅಭಿನಹಿಸಿ ಮನೆಮಾತಾಗಿದ್ದರು. ಕನ್ನಡದ  ಕಂಠಿ , ಜಗ್ಗುದಾದ ಸೇರಿದಂತೆ 12ಕ್ಕೂ ಅಧಿಕ ಜಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಗುರುಮೂರ್ತಿ ಅವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್‌, ನಿಶಾಂತ್‌ ಅವರನ್ನು ಅಗಲಿದ್ದಾರೆ. ಹಿರಿಯ ಪುತ್ರ ವಿದೇಶದಲ್ಲಿರುವುದರಿಂದ ವಾಪಸ್‌ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next