Advertisement

ವರ್ಗಾವಣೆಗೊಂಡ ಜನಸ್ನೇಹಿ ಸಬ್ ಇನ್ ಸ್ಪೆಕ್ಟರ್ ಪವನ್ ಕುಮಾರ್ ಗೆ ಸನ್ಮಾನ

07:13 PM Jun 27, 2023 | Team Udayavani |

ಕೊಟ್ಟಿಗೆಹಾರ: ಬಾಳೂರು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಜನಸ್ನೇಹಿ ಸಬ್ ಇನ್ ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್ ಅವರಿಗೆ ಗಬ್ಗಲ್ ನ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

Advertisement

ಬಳಿಕ ಗಬ್ಗಲ್ ಕರವೇ ಅಧ್ಯಕ್ಷ ಮಂಜುನಾಥ್ ಮಾತನಾಡಿ’ ಪವನ್ ಕುಮಾರ್ ಅವರು ಒಂದು ವರ್ಷಗಳ ಕಾಲ ಕಾನೂನು ಪಾಲನೆಯನ್ನು ಸಮಗ್ರವಾಗಿ ನಿರ್ವಹಿಸಿ ಖಡಕ್ ಅಧಿಕಾರಿಯಾಗಿದ್ದರು. ಪೊಲೀಸ್ ಠಾಣೆಯನ್ನು ನವೀಕರಿಸಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿ ಜನಸ್ನೇಹಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವರ್ಗಾವಣೆಯಾಗಿರುವುದು ಬೇಸರ ತಂದಿದೆ. ಮುಂದೆ ವರ್ಗಾವಣೆಯಾಗಿ ಹೋಗುವ ಠಾಣೆಗಳಲ್ಲೂ ಜನಸ್ನೇಹಿಯಾಗಿ ಜನರಿಗೆ ಅವರಿಂದ ಉತ್ತಮ ಸೇವೆ ದೊರೆಯುವಂತಾಗಲಿ’ ಎಂದರು.

ಈ ಸಂದರ್ಭದಲ್ಲಿ ಕಳಸ ರಾಜ್ ಕುಮಾರ್ ಅಭಿಮಾನಿ ಕನ್ನಡರಾಜು,ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದ ವ್ಯವಸ್ಥಾಪಕ ಎಂ.ಆರ್.ನಾಗರಾಜ್ ಭಟ್,ಕಳಸ ಕರವೇ ಅಧ್ಯಕ್ಷ ಪೂರ್ಣೇಶ್,ಕರವೇಯ ಸುಭಾಷ್, ರಂಜಿತ್, ಸುದರ್ಶನ್, ಸಚಿನ್, ರತೀಶ್, ರಘು, ಪ್ರದೀಪ್, ಗುರುಪ್ರಸಾದ್, ಸಚಿನ್ ಇದ್ದರು.

ಇದನ್ನೂ ಓದಿ: ಮುಂಬೈ-ಗೋವಾ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲಿಗೆ ಚಾಲನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next