Advertisement

ಸಿದ್ದರಾಮಯ್ಯರನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ರೆ ತಪ್ಪಿಲ್ಲ

02:56 PM Nov 07, 2017 | Team Udayavani |

ಬೆಳಗಾವಿ: ಇವ್‌ನ್ಯಾರು..ಅವ್ನ ಜಾತಿ ಯಾವುದು ..ಸಿದ್ದರಾಮಯ್ಯನನ್ನು ಪಾಕಿಸ್ಥಾನಕ್ಕೆ ಕಳುಹಿಸಿದರೂ ತಪ್ಪಿಲ್ಲ..ಇದು ಬಿಜೆಪಿ ಶಾಸಕ ಸಂಜಯ್‌ ಪಾಟೀಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಪರಿ . 

Advertisement

ಮಂಗಳವಾರ ಟಿಪ್ಪು ಜಯಂತಿ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಜಯ್‌ ಪಾಟೀಲ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

‘ಸ್ವಾತಂತ್ರ್ಯ ಬಂದು 70 ವರ್ಷಗಳಾಗಿವೆ. ಎಷ್ಟೊಂದ್‌ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಒಮ್ನೆ ಬುದ್ಧಿವಂತ ಮುಖ್ಯಮಂತ್ರಿ  ಅದ್ಕೊಂಡಿದ್ದಾರೆ’ಎಂದರು

‘ನಾವು ನೀನ್‌ ಯಾರಾ  ಎಂದು ಕೇಳಬೇಕಾಗುತ್ತೆ.ಇದೇ ರೀತಿ ಹಿಂದೂ ವಿರೋಧಿ ಧೋರಣೆ ತೋರಿದರೆ ಸಿದ್ದರಾಮಯ್ಯ ರನ್ನು ಪಾಕಿಸ್ಥಾನಕ್ಕೆ ಕಳುಹಿಸಿದರೂ ತಪ್ಪಿಲ್ಲ’ ಎಂದು ಗುಡುಗಿದರು. 

ಇದೇ ವೇಳೆ ‘ನಾವು ಮುಸಲ್ಮಾನ ವಿರೋಧಿ ಅಲ್ಲ. ಟಿಪ್ಪು ಸುಲ್ತಾನ ವಿರೋಧಿಗಳು’ ಎಂದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next