Advertisement

Copter ಜತೆಗೆ ಸೆಲ್ಫಿ: ರೆಕ್ಕೆ ತಾಗಿ ಸರ್ಕಾರಿ ಅಧಿಕಾರಿ ಸಾವು

08:17 PM Apr 23, 2023 | Team Udayavani |

ಡೆಹ್ರಾಡೂನ್‌: ಹೆಲಿಕಾಪ್ಟರ್‌ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಕಾಪ್ಟರ್‌ನ ರೆಕ್ಕೆ ತಾಗಿ ಸರ್ಕಾರಿ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರಾಖಂಡದಲ್ಲಿ ವರದಿಯಾಗಿದೆ. ಕೇದಾರನಾಥ ಧಾಮಕ್ಕೆ ಆಗಮಿಸಿದ್ದ ಕಾಪ್ಟರ್‌ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆಂದು ಉತ್ತರಾಖಂಡ ನಾಗರಿಕ ವಿಮಾನಯಾನ ಪ್ರಾಧಿಕಾರದ ಹಣಕಾಸು ನಿಯಂತ್ರಕರಾಗಿದ್ದ ಜಿತೇಂದ್ರ ಕುಮಾರ್‌ ಸೈನಿ ಮುಂದಾಗಿದ್ದರು. ಈ ವೇಳೆ ಅರಿವಿಲ್ಲದಂತೆ ಹೆಲಿಕಾಪ್ಟರ್‌ನ ಟೈಲ್‌ ರೋಟರ್‌ ಬ್ಲೇಡ್‌ ವ್ಯಾಪ್ತಿಯ ಬಳಿ ಬಂದಿದ್ದಾರೆ. ಸೆಲ್ಫಿ ತೆಗೆಯುತ್ತಿದ್ದಂತೆ, ಬ್ಲೇಡ್‌ ಬೀಸಿದ ರಭಸಕ್ಕೆ ಗಂಭೀರ ಗಾಯಗೊಂಡು ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next