Advertisement

ಸ್ವಯಂಪ್ರೇರಿತ ರಕ್ತದಾನ ಶಿಬಿರ

03:17 PM May 11, 2020 | Suhan S |

ಬೆಳಗಾವಿ: ಇಲ್ಲಿನ ಗೋಮಟೇಶ ವಿದ್ಯಾಪೀಠದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಮಾಜಿ ಶಾಸಕ ಸಂಜಯ ಬಿ. ಪಾಟೀಲ ನೇತೃತ್ವದಲ್ಲಿ ಮಹಾವೀರ ಬ್ಲಡ್‌ ಬ್ಯಾಂಕ್‌ ಬೆಳಗಾವಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಕೋವಿಡ್‌ -19 ಮಹಾಮಾರಿಯ ಭೀತಿಯಿಂದಾಗಿ ರಕ್ತದಾನ ಮಾಡಲು ದಾನಿಗಳು ಯಾರೂ ಮುಂದೆ ಬರದ ಕಾರಣ ಆಸ್ಪತ್ರೆ, ಬ್ಲಿಡ್‌ ಬ್ಯಾಂಕ್‌ಗಳಲ್ಲಿ ರಕ್ತ ಸಂಗ್ರಹಣೆಯ ಕೊರತೆಯಾಗಿ ರೋಗಿಗಳಿಗೆ ರಕ್ತ ಸಿಗದೇ ಜೀವನ್ಮರಣದ ನಡುವೆ ಹೋರಾಡುವ ಸ್ಥಿತಿ ಎದುರಾಗಿದ್ದನ್ನು ಮನಗಂಡು ಈ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 76 ಬಾಟಲಿ ರಕ್ತವನ್ನು ಸಂಗ್ರಹಿಸಿ ಬಡರೋಗಿಗಳಿಗೆ ಅನುಕೂಲವಾಗಲು ಮಹಾವೀರ ಬ್ಲಿಡ್‌ ಬ್ಯಾಂಕ್‌ ಗೆ ಹಸ್ತಾಂತರಿಸಲಾಯಿತು.

Advertisement

ಮಹೇಶ ಮೋಹಿತೆ, ಪ್ರಭು ಹೂಗಾರ, ಯುವರಾಜ ಜಾಧವ, ಸನತಕುಮಾರ ವಿ ವಿ, ರಾಜೇಶ ಪಾಟೀಲ, ಅಭಯ ಅವಲಕ್ಕಿ, ವೀರಭದ್ರ ಪೂಜಾರ, ವೀರಭದ್ರಯ್ನಾ ನೇಸರಗಿ, ಡಾ|ಯಲ್ಲಪ್ಪಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next