Advertisement

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆ! ಹಲವರಿಗೆ ನಿರಾಸೆ

03:09 PM Oct 28, 2020 | sudhir |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ನೂತನ ವ್ಯವಸ್ಥಾಪನಾ ಮಂಡಳಿಯ ಸದಸ್ಯರ ಆಯ್ಕೆ ನಡೆದಿದೆ.

Advertisement

ರಾಜ್ಯ ಧಾರ್ಮಿಕ ಪರಿಷತ್‌ ಆಯುಕ್ತ ಹಾಗೂ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಬೆಂಗಳೂರು ಇದರ ಕಾರ್ಯದರ್ಶಿ ಅವರು ಹೊರಡಿಸಿದ ಸುತ್ತೋಲೆಯಲ್ಲಿ ಡಾ| ಕೆ.ರಾಮಚಂದ್ರ ಅಡಿಗ ಕೊಲ್ಲೂರು, ರತ್ನ ರಮೇಶ ಕುಂದರ್‌ ಕೊಲ್ಲೂರು, ಸಂಧ್ಯಾ ರಮೇಶ್‌ ಮಚ್ಚಟ್ಟು , ಗೋಪಾಲಕೃಷ್ಣ ರಾವ್‌ ಸೇನಾಪುರ, ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್‌ ಕಿಣಿ ಬೆಳ್ವೆ, ಡಾ.ಆತುಲ್‌ ಕುಮಾರ್‌ ಶೆಟ್ಟಿ ಚಿತ್ತೂರು, ಜಯಾನಂದ ಹೋಬಳಿದಾರ ಬೆ„ಂದೂರು, ಶೇಖರ ಪೂಜಾರಿ ಕಾರ್ಕಡ ಅವರು ಆಯ್ಕೆಯಾಗಿರುತ್ತಾರೆ.

ಹಲವರಿಗೆ ನಿರಾಸೆ
ಕಳೆದ 7 ತಿಂಗಳಿನಿಂದ ಭಾರೀ ಪೈಪೋಟಿ ನಡುವೆ ಸಮಿತಿ ಸದಸ್ಯರಾಗಲು ನಾನಾ ಮಾರ್ಗದಲ್ಲಿ ಪ್ರಯತ್ನಿಸಿ ಪ್ರಚಾರಗಿಟ್ಟಿಸಿಕೊಂಡು ಸ್ಥಾನ ಲಭಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಹಲವರಿಗೆ ಅನಿರೀಕ್ಷಿತ ಬೆಳವಣಿಗೆಯಲ್ಲಾದ ಬದಲಾವಣೆಯ ಕೊನೆಯ ಹಂತದ ಪಟ್ಟಿ ಬಿಡುಗಡೆ ನಿರೀಕ್ಷೆಯನ್ನು ಹುಸಿಮಾಡಿದೆ. ಈದೀಗ ಆಯ್ಕೆಯಾದ 9 ಮಂದಿ ಸದಸ್ಯರು ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಕಂಡುಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲಾ. ಡಾ|ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ, ಹಾಗೂ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರ ಹೆಸರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕೇಳಿ ಬರುತ್ತಿದ್ದು, ರಾಜಿ ಸೂತ್ರದ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವುದೇ ಅಥವಾ ಚುನಾವಣೆಯ ಮೂಲಕ ಆಯ್ಕೆ ನಡೆಯಲಾಗುವುದೇ ಅನ್ನುವುದನ್ನೂ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next