Advertisement

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ

04:43 AM Jun 25, 2020 | Lakshmi GovindaRaj |

ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗುತ್ತಿದ್ದ ವಾಹನದ ಮೇಲೆ ದಾಳಿ ಮಾಡಿರುವ ಡಿವೈಎಸ್ಪಿ ನವೀನ್‌ ಕುಮಾರ್‌ ಮತ್ತು ಸಿಬ್ಬಂದಿ ವಾಹನ ಸಮೇತ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಸತ್ತೇಗಾಲ  ಸಮೀಪ ಉಗನಿಯ ರಸ್ತೆಯಲ್ಲಿ ವಾಹನ ತಡೆದಿದ್ದಾರೆ.

Advertisement

ಚಾಲಕ ಮಂಡ್ಯದ ಮಂಜೇಗೌಡ ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಲಿಂಗರಾಜು ಅಕ್ಕಿಯನ್ನು ಹನೂರು ತಾಲೂಕಿನ ಒಡೆಯರಪಾಳ್ಯದಿಂದ ಮಂಡ್ಯಕ್ಕೆ  ಸಾಗಿಸುತ್ತಿದ್ದಾಗ ಪೊಲೀಸರಿಗೆ ಸೆರೆಯಾಗಿದ್ದಾರೆ. ಆಹಾರ ಶಿರಸ್ತೇದಾರ್‌ ಪಡಿತರ ಅಕ್ಕಿಯೆಂದು ಗುರುತಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next