Advertisement

ರೈತರ ಧರಣಿಗೆ ಸೀತಾರಾಮ ಯೆಚೂರಿ ಬೆಂಬಲ

11:29 AM Jan 22, 2020 | Suhan S |

ಕಲಬುರಗಿ: ತೊಗರಿ ಖರೀದಿ ವಿಳಂಬ ಖಂಡಿಸಿ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ಸಂಸದ ಡಾ| ಉಮೇಶ್‌ ಜಾಧವ ಕಚೇರಿ ಎದುರು ರೈತ ಸಂಘಗಳ ಮುಖಂಡರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಿಪಿಐಎಂ ಪಕ್ಷದ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಭೇಟಿ ನೀಡಿ, ಬೆಂಬಲ ಸೂಚಿಸಿದರು.

Advertisement

ತೊಗರಿ ನೋಂದಣಿ ಮತ್ತು ತೊಗರಿ ಖರೀದಿ ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ ಜ.16ರಿಂದ ಕರ್ನಾಟಕ ಪ್ರಾಂತ ರೈತ ಸಂಘ, ಅಖೀಲ ಭಾರತ ಕಿಸಾನ್‌ ಸಭಾ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಧರಣಿ ಸ್ಥಳಕ್ಕೆ ಭೇಟಿದ ಸೀತಾರಾಮ ಯೆಚೂರಿ, ಕಲಬುರಗಿ ಮಾತ್ರವಲ್ಲ ದೇಶಾದ್ಯಂತ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದರು.

ರೈತರ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೆಳೆಗಳಿಗೆ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತೊಗರಿ ಖರೀದಿಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಬೇಳೆ-ಕಾಳುಗಳ ಬೆಳೆಗಾರರ ಸಂಕಷ್ಟದ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೇಂಥಿಲ್‌, ಹಿರಿಯ ರೈತ ಮುಖಂಡ ಮಾರುತಿ ಮಾನ್ಪಡೆ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ್‌ ಮಾಡಿಯಾಳ, ಮೌಲಾ ಮುಲ್ಲಾ ಅಲ್ತಾಫ್‌ ಇನಾಂದಾರ್‌, ಅಶೋಕ್‌ ಮ್ಯಾಗೇರಿ, ಮಲ್ಲಣ್ಣಗೌಡ ಬನ್ನೂರ, ಗಂಗಮ್ಮ, ಗೌರಮ್ಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next