Advertisement

ಸೀಮಾಪುರ ಗಲಭೆ: ಐವರ ಬಂಧನ

09:55 AM Jan 07, 2020 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೊಸದಿಲ್ಲಿಯ ಸೀಮಾಪುರದಲ್ಲಿ ನಡೆದಿದ್ದ ಗಲಭೆಗಳಿಗೆ ಸಂಬಂಧಿಸಿದಂತೆ ಇಬ್ಬರು ಬಾಂಗ್ಲಾದೇಶಿ ನಾಗರಿಕರು ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಕೋರ್ಟ್‌ನಲ್ಲಿ ಅವರನ್ನು ಹಾಜರುಪಡಿಸಿದ ವೇಳೆ ಎರಡು ವಾರಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಲಾಯಿತು.

Advertisement

ಇತರ ಮೂವರು ಗಾಜಿಯಾಬಾದ್‌, ಫಿಲಿಭೀತ್‌ ಮತ್ತು ಸೀಮಾಪುರದ ನಿವಾಸಿಗಳೇ ಆಗಿದ್ದಾರೆ. ಮೊಹಮ್ಮದ್‌ ಆಝಾದ್‌ ಮತ್ತು ಮೊಹಮ್ಮದ್‌ ಶುಭಾನ್‌ ಬಾಂಗ್ಲಾದೇಶದ ನಾಗರಿಕರು. ಇವರಲ್ಲದೆ ಇಬ್ಬರು ಬಾಲಾಪರಾಧಿಗಳನ್ನೂ ಬಂಧಿಸಲಾಗಿದ್ದು, ಅವರನ್ನು ಬಾಲ್ಯ ನ್ಯಾಯ ಮಂಡಳಿ ಸುಪರ್ದಿಗೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next