Advertisement

ನನ್ನ ಅಭಿವೃದ್ಧಿ ನೋಡಿ ಮತ ನೀಡಿ: ಧ್ರುವ

06:04 PM Apr 16, 2019 | Lakshmi GovindaRaju |

ತಿ.ನರಸೀಪುರ: ಕಳೆದ 10 ವರ್ಷಗಳಲ್ಲಿ ರಸ್ತೆ, ಸೇತುವೆ ಸೇರಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರ ವ್ಯಾಪ್ತಿ ಮಾಡಿದ್ದೇನೆ. ತನ್ನ ಅಭಿವೃದ್ಧಿ ನೋಡಿ ಮತ ನೀಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ ಮನವಿ ಮಾಡಿದರು. ಪಟ್ಟಣದ ಹೆಳವರಹುಂಡಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮನವಿ ಮಾಡಿದರು.

Advertisement

ಕ್ಷೇತ್ರ ಅಭಿವೃದ್ಧಿ: ಕಳೆದ 2 ಬಾರಿ ಸಂಸದನಾಗಿ ತನಗೆ ಅವಕಾಶ ಕೊಟ್ಟಿದ್ದಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕೈಲಾದಷ್ಟು ಜಾರಿಗೊಳಿಸಿದ್ದೇನೆ. ಕಪಿಲಾ ಸೇತುವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಮಾಡಿದ್ದೇನೆ. ರಾಜ್ಯದ ಹಿಂದಿನ ಕಾಂಗ್ರೆಸ್‌ ಸರ್ಕಾರದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸಚಿವರಾಗಿದ್ದ ಡಾ.ಮಹದೇವಪ್ಪ ಹೆಚ್ಚಿನ ಅನುದಾನ ಕೊಡಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆಂದರು.

ಸಮಸ್ಯೆ ಆಲಿಸುವೆ: ತನ್ನ ದೈನಂದಿನ ಕಾರ್ಯಕ್ರಮದಲ್ಲಿ ಮೊದಲ ಜನಸಾಮಾನ್ಯರನ್ನು ಭೇಟಿ ಮಾಡುತ್ತೇನೆ. ಯಾರೇ ಬಂದರೂ ತಾನು ಅವರಿಗೆ ಸುಲಭವಾಗಿ ಸಿಗುತ್ತೇನೆ. ಯಾರೇ ಕರೆದರೂ ಅವರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುತ್ತೇನೆಂದರು.

ಯೋಚಿಸಿ ಮತದಾನ ಮಾಡಿ: ಅಭಿವೃದ್ಧಿಯೇ ತನ್ನ ಮೊದಲ ಮಂತ್ರ. 8 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿದ್ದೇನೆ. ಕೊನೆ ಭಾಗದ ಗೋಪಿನಾಥಂ ವರೆಗೂ ಜನರ ಸಮಸ್ಯೆ ಆಲಿಸಿದ್ದೇನೆ. ಪರಿಹಾರ ಕೊಟ್ಟಿದ್ದೇನೆ. ಇದು ತನ್ನ ಸೇವೆಯ ಚಟುವಟಿಕೆ. ತನ್ನ ಎದುರಾಳಿ ಅಭ್ಯರ್ಥಿ ಬಗ್ಗೆ ನೀವೇ ಯೋಚಿಸಿ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಪ್ರಸಾದ್‌ ಅವರಿಗೆ ಟಾಂಗ್‌ ನೀಡಿದರು.

ಅಭಿವೃದ್ಧಿಗೆ ಗೆಲ್ಲಿಸಿ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಚಾಮರಾಜನಗರ ಕ್ಷೇತ್ರ ಪೂರ್ತಿ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ಹಿರಿಯ ರಾಜಕಾರಣಿ ಅನೇಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಇವರನ್ನು ಮತ್ತೆ ಅಭಿವೃದ್ಧಿಗಾಗಿ ಗೆಲ್ಲಿಸಬೇಕು. ಗೆಲ್ಲಿಸದಿದ್ದಲ್ಲಿ ಇದು ನಮಗೆ ಅವಮಾನ ಎಂದು ಅಭಿಪ್ರಾಯಪಟ್ಟರು.

Advertisement

ನಂತರ ಹುಣಸೂರು, ತಿರಮಕೂಡಲು, ಕಿರಗಸೂರು, ಬಿಲಿಗೆರೆಹುಂಡಿ ಡಣಾಯಕನಪುರ, ಕೂಡ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಪುರಸಭಾ ಸದಸ್ಯ ಹೆಳವರಹುಂಡಿ ಸೋಮು, ಟಿ.ಎಂ.ನಂಜುಂಡಸ್ವಾಮಿ, ತುಂಬಲ ಪ್ರಕಾಶ್‌, ಮಂಜುನಾಥ್‌, ಬ್ಲಾಕ್‌ ಅಧ್ಯಕ್ಷ ಮುದ್ದೇಗೌಡ, ಜೆಡಿಎಸ್‌ ಅಧ್ಯಕ್ಷ ತಾಯೂರು ಪ್ರಕಾಶ್‌, ಸ್ವಾಮಿನಾಥ್‌ಗೌಡ, ಮರಯ್ಯ, ಆಲಗೂಡು ನಾಗರಾಜು, ಅಮ್ಜದ್‌ಖಾನ್‌, ಕರಿಯಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next