Advertisement

ಮಕರಜ್ಯೋತಿ ನೋಡಿ ಅಯ್ಯಪ್ಪ ಭಕ್ತರು ಪುನೀತ

08:59 AM Jan 15, 2017 | |

ಶಬರಿಮಲೆ (ಕೇರಳ): ಇಲ್ಲಿನ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರವಿಳಕ್ಕು (ಮಕರ ಸಂಕ್ರಾಂತಿ) ಪ್ರಯುಕ್ತ ಶನಿವಾರ ಸಂಜೆ ನಡೆದ ವಿಶೇಷ ದೀಪಾರಾಧನಾ ಪೂಜೆಗೆ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಸೇರಿ ಸಾವಿರಾರು ಭಕ್ತರು ಸಾಕ್ಷಿಯಾದರು. 

Advertisement

ಕಳೆದ ಕೆಲ ದಿನಗಳಿಂದ ದೀಪಾರಾಧನಾ ಪೂಜೆಗೆ ಕಾದಿದ್ದ ಮಾಲಾಧಾರಿಗಳು, ಭಕ್ತರು ದೇವಾಲಯದ ಮಹಾದ್ವಾರ ತೆರೆ ಯುವ ವೇಳೆಗೆ ಪವಿತ್ರ ಶಬರಿಮಲೆ ಪರ್ವತ ಏರಿ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಹರಕೆ ತೀರಿಸಿದರು. ನಂತರ ಪೊನ್ನಂಬಾಲಮೇಡು ಪರ್ವತದಲ್ಲಿ ಗೋಚರವಾದ “ಮಕರ ಜ್ಯೋತಿ’ ಕಂಡು ಭಕ್ತರು ಪುನೀತರಾದರು.

ಕಳೆದ ಡಿ. 31 ರಂದು ಸಣ್ಣ ಪ್ರಮಾಣದ ಕಾಲು¤ಳಿತವಾದ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಲಾಗಿತ್ತು. ಹಾಗಾಗಿ ಅದೃಷ್ಟವಶಾತ್‌ ಈ ಬಾರಿ ಯಾವುದೇ ದುರ್ಘ‌ಟ ನೆಗಳು ನಡೆಯಲಿಲ್ಲ. ಈ ಬಾರಿ ಒಟ್ಟು ಸುಮಾರು 4.50 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next