Advertisement

ಸಿಂಧೂತಾಯಿ ಸಪ್ಕಾಳ್ಗೆ ಬಸವ ರಾಷ್ಟ್ರೀಯ ಪ್ರಶಸ್ತಿ

10:23 AM Apr 16, 2017 | |

ಬೆಂಗಳೂರು: 2016ನೇ ಸಾಲಿನ ಬಸವ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಪುಣೆಯ ಸಿಂಧೂತಾಯಿ ಸಪ್ಕಾಳ್ ಆಯ್ಕೆಗೊಂಡಿದ್ದಾರೆ.

Advertisement

ರಂಗಭೂಮಿ ಹಾಗೂ “ಬಸವ ರಾಷ್ಟ್ರೀಯ ಪ್ರಶಸ್ತಿ’ ಪಟ್ಟಿಯನ್ನು ಶನಿವಾರ ಸರ್ಕಾರ ಪ್ರಕಟಿಸಿದ್ದು, ರಂಗಭೂಮಿ ವಿಭಾಗದಲ್ಲಿ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿಗೆ ಚಿಂದೋಡಿ ಶ್ರೀಕಂಠೇಶ್‌ ಹಾಗೂ ಬಿ.ವಿ.ಕಾರಂತ ಪ್ರಶಸ್ತಿಗೆ ಶ್ರೀನಿವಾಸ್‌ ಜಿ.ಕಪ್ಪಣ್ಣ ಆಯ್ಕೆಯಾಗಿದ್ದಾರೆ.

ಬಸವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರದ ಮೊತ್ತ 10 ಲಕ್ಷ ರೂ., ಬಿ.ವಿ.ಕಾರಂತ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಮೊತ್ತ 3 ಲಕ್ಷ ರೂ.ಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next