Advertisement

ತಿರುಮಲದಲ್ಲಿ ಭದ್ರತಾ ಲೋಪ: ಭಕ್ತನಿಂದ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ

08:29 PM May 08, 2023 | Team Udayavani |

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಭದ್ರತಾ ಲೋಪ ವರದಿಯಾಗಿದೆ. ಭಕ್ತನೊಬ್ಬ ದೇವಾಲಯದ ಗರ್ಭಗುಡಿ “ಆನಂದ ನಿಲಯಂ”ನ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಅಲ್ಲದೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

Advertisement

ಪ್ರತಿ ಹಂತದಲ್ಲಿ ಭದ್ರತೆಯಿರುವ ತಿರುಮಲ ದೇಗುಲದಲ್ಲಿ ಭಕ್ತನೊಬ್ಬ ಹೇಗೆ ಮೊಬೈಲ್‌ ತೆಗೆದುಕೊಂಡು ಒಳಗೆ ಪ್ರವೇಶಿಸದ ಎಂಬುದು ಪ್ರಶ್ನೆಯಾಗಿದೆ. ಭಾನುವಾರ ರಾತ್ರಿ ಈ ವಿಡಿಯೋ ಚಿತ್ರೀಕರಣ ಆಗಿದೆ ಎಂದು ಗುರುತಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಸಲು ಟಿಟಿಡಿ ಪರಿವೀಕ್ಷಣಾ ಮತ್ತು ಭದ್ರತಾ ವಿಭಾಗ ಆದೇಶಿಸಿದೆ.

ದೇಗುಲ ಪ್ರವೇಶಿಸುವ ಮುನ್ನ ಮತ್ತು ಒಳಗೆ ಪ್ರತಿ ಹಂತದಲ್ಲೂ ಭಕ್ತರ ತಪಾಸಣೆ ನಡೆಸಲಾಗುತ್ತದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳಿವೆ. ಅಲ್ಲದೇ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಭದ್ರತಾ ಲೋಪವಾಗಿದೆ. ಟಿಟಿಡಿ ಭದ್ರತೆಗಾಗಿಯೇ ವಾರ್ಷಿಕ 300 ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next