Advertisement

ಪಡುಬಿದ್ರಿ: ಉಲ್ಬಣಿಸಿದ ಕಡಲ್ಕೊರೆತ

04:43 PM Aug 02, 2019 | keerthan |

ಪಡುಬಿದ್ರಿ: ಕರ್ನಾಟಕ ಕರಾವಳಿಯಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಪಡುಬಿದ್ರಿಯ ಕರಾವಳಿ ತೀರದಲ್ಲಿ ಕಡಲ್ಕೊರೆತಕ್ಕೆ ಬಂಡೆಕಲ್ಲುಗಳು, ಇಂಟರ್ ಲಾಕ್ ಗಳು ಆಹುತಿಯಾಗಿದೆ.

Advertisement

ಸಾಗರ ವಿದ್ಯಾಮಂದಿರ ಶಾಲೆಯ ಎದುರು ಆಕ್ಟ್ ನ ಬೀಚ್ ನಿರ್ವಹಣಾ ಸಮಿತಿಯು ನಿರ್ಮಿಸಿರುವ ಸಾರ್ವಜನಿಕ ವೇದಿಕೆಯ ಬಂಡೆಕಲ್ಲುಗಳು, ಅಂಗಣಗಳ ಇಂಟರ್ ಲಾಕ್ ಗಳು ಕಡಲ್ಕೊರೆತಕ್ಕೆ ಆಹುತಿಯಾಗಿದೆ.

ಪಡುಬಿದ್ರಿಯಲ್ಲಿ ಕಾಡಿಪಟ್ಣ ಲಕ್ಷ್ಮಣ ಸಾಲ್ಯಾನ್, ಮಧ್ವನಗರದ ಸುಧಾಕರ ರಾವ್ ಮನೆ ಬಳಿ, ನಡಿಪಟ್ಣ ವಿಷ್ಣು ಭಜನಾ ಮಂದಿರದ ಬಳಿ ಕೊರೆತವು ಮತ್ತೆ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ.

ಎರ್ಮಾಳು ಬಡಾ ಗ್ರಾಮದಲ್ಲೂ ಸಮುದ್ರ ಕೊರೆತವು ಉಲ್ಬಣಿಸಿದ್ದು ಈ ಪ್ರದೇಶಕ್ಕೆ ಕಾಪು ತಹಶೀಲ್ದಾರ್ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next