Advertisement

Accident: ಸ್ಕೂಟಿ ಢಿಕ್ಕಿ: ಪಾದಚಾರಿಗೆ ಗಂಭೀರ ಗಾಯ

08:00 PM Aug 31, 2023 | Team Udayavani |

ಪಡುಬಿದ್ರಿ: ನಂದಿಕೂರಿನ ಪಾಂಡ್ಯಾರು ಕಾಂಪ್ಲೆಕ್ಸ್‌ ಬಳಿ ಆ. 29ರಂದು ಸಂಜೆಯ ವೇಳೆ ಕಾರ್ಕಳ ಕಡೆಯಿಂದ ಪಡುಬಿದ್ರಿಯತ್ತ ಅನೀಶ್‌ ಚಲಾಯಿಸುತ್ತಿದ್ದ ಸ್ಕೂಟಿ ಢಿಕ್ಕಿಯಾಗಿ ಪಾದಚಾರಿ ಬಾಬು ಆಚಾರ್ಯ (70) ತೀವ್ರ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಢಿಕ್ಕಿಯಿಂದ ರಸ್ತೆಗೆ ಬಿದ್ದ ಬಾಬು ಆಚಾರ್ಯ ಅವರ ಬಲಗಾಲ ಮೂಳೆ ಮುರಿತವಾಗಿದ್ದು ತಲೆಗೆ ತೀವ್ರತರದ ಗಾಯವಾಗಿದೆ. ಮುಖ ಹಾಗೂ ಕೈಗಳಿಗೂ ತರಚಿದ ಗಾಯÊವಾಗಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next