Advertisement

Mangaluru ಡಿವೈಡರ್‌ಗೆ ಸ್ಕೂಟರ್‌ ಢಿಕ್ಕಿ: ಎ.ಸಿ. ಮೆಕಾನಿಕ್‌ ಸಾವು

09:40 PM Jun 07, 2024 | Team Udayavani |

ಮಂಗಳೂರು: ಡಿವೈಡರ್‌ಗೆ ಸ್ಕೂಟರ್‌ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಮೇರಿಹಿಲ್‌ ಜಂಕ್ಷನ್‌ ಬಳಿ ಸಂಭವಿಸಿದೆ.

Advertisement

ಕಾವೂರು ಬೊಲ್ಪುಗುಡ್ಡೆ ನಿವಾಸಿ ನಿಶಾಂಕ್‌ ದೇವಾಡಿಗ (23) ಮೃತಪಟ್ಟವರು. ಅವರು ರಾತ್ರಿ 11.30ರ ಸುಮಾರಿಗೆ ಸ್ಕೂಟರ್‌ನಲ್ಲಿ ವಿಮಾನ ನಿಲ್ದಾಣ ರಸ್ತೆಯ ಕೆಪಿಟಿ ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದಾಗ ಮೇರಿಹಿಲ್‌ ಜಂಕ್ಷನ್‌ ಬಳಿಯ ನೆಕ್ಸಾ ಶೋರೂಂ ಎದುರುಗಡೆ ರಸ್ತೆ ನಡುವಿನ ಡಿವೈಡರ್‌ಗೆ ಸ್ಕೂಟರ್‌ ಢಿಕ್ಕಿಯಾಯಿತು.

ನಿಶಾಂಕ್‌ ಅವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಹೊಡೆತ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ರಾತ್ರಿ 12.30ರ ವೇಳೆಗೆ ಮೃತಪಟ್ಟಿದ್ದಾರೆ. ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶಾಂಕ್‌ ದೇವಾಡಿಗ ಎ.ಸಿ. ಮೆಕಾನಿಕ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಅವರ ತಂದೆ ಆಟೋರಿಕ್ಷಾ ಚಾಲಕರಾಗಿದ್ದಾರೆ. ಅವರ ತಮ್ಮ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ನಿಶಾಂಕ್‌ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಅಪಾಯಕಾರಿ ಸ್ಥಳ
ಮೇರಿಹಿಲ್‌ ಜಂಕ್ಷನ್‌ ಬಳಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿವೆ. ಇದೇ ಸ್ಥಳದ ಪಕ್ಕದಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಸ್ಕೂಟರ್‌ ಡಿವೈಡರ್‌ಗೆ ಢಿಕ್ಕಿ ಹೊಡೆದು ಅಪ್ರಾಪ್ತ ವಯಸ್ಕರಿಬ್ಬರು ಮೃತಪಟ್ಟಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next