Advertisement
ಅನೇಕ ಸೌರವ್ಯೂಹಗಳ ಗುರುತ್ವವನ್ನೆಲ್ಲ ಆ ಬಿಂದು ಅಡಗಿಸಿಟ್ಟುಕೊಂಡಿರುವಂತಿದೆ. ಆ ಕಾಯ ಯಾವುದು?- ಅದೇ ಇತ್ತೀಚೆಗೆ ಕೆಮರಾ ಕಣ್ಣಿ¡ಗೆ ಸಿಕ್ಕಿ ಸುದ್ದಿ ಮಾಡಿರುವ ಏಕೈಕ “ಕಪ್ಪು ಕುಳಿ’ ಅಥವಾ “ಕಪ್ಪು ರಂಧ್ರ’. “ಕೃಷ್ಣ ವಿವರ’ ಎನ್ನುವ ಆಕರ್ಷಕ ನಾಮವೂ ಇದೆ. ಅಂಥವು ಬ್ರಹ್ಮಾಂಡದಲ್ಲಿ ಸಾಕಷ್ಟಿವೆ. ಐನ್ಸ್ಟಿàನ್ರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದಂತೆ “ಕಪ್ಪು ಕುಳಿ’ ಅತ್ಯಧಿಕ ದ್ರವ್ಯರಾಶಿಯ ಫಲವಾಗಿ ಒಂದು ಆಕಾಶ ಕಾಯವು “ದೇಶ-ಕಾಲ’ವನ್ನು ವಕ್ರಗೊಳಿಸುವಂತೆ ತಳೆಯುವ ಉಗ್ರಾ ವತಾರ. ತನ್ನ ಭಾರ ತಾನೇ ಹೊರಲಾರದೆ ಒಳಕುಸಿತಕ್ಕೊಳಗಾಗುವ ದುರಂತ ಸ್ಥಿತಿ. ನಮ್ಮ “ಕ್ಷೀರಪಥ’ದ(ಸೂರ್ಯನನ್ನೊಳಗೊಂಡ ನಕ್ಷತ್ರ ರಾಶಿ) ಕೇಂದ್ರ ಭಾಗದಲ್ಲೇ ಅಂಥ ಕಾಯವಿದೆ. ಗಾಬರಿ ಬೇಡ. ನಮ್ಮಿಂದ 7,7000 ಜ್ಯೋತಿವರ್ಷಗಳ ಅಂತರವಿರುವ ಕಾರಣ ಭೂಮಿಗೆ ಬಾಧೆಯಿಲ್ಲ. ಅಂದಹಾಗೆ ಒಂದು ಜ್ಯೋತಿರ್ವರ್ಷ ಎಂದರೆ ಬೆಳಕು ಒಂದು ಸೆಕೆಂಡಿಗೆ ಸುಮಾರು ಮೂರು ಲಕ್ಷ ಕಿ.ಮೀ. ವೇಗದಲ್ಲಿ ಧಾವಿಸುವ ದೂರ. ಲೆಕ್ಕ ಹಾಕಿ!
Related Articles
Advertisement
ತಾರೆ ಜನನ ಪ್ರಕ್ರಿಯೆಗೆ ಕನಿಷ್ಠ 10 ಮಿಲಿಯನ್ ವರ್ಷಗಳೇ ಬೇಕು. ಯಾವುದೇ ಆಕಾಶಕಾಯ ತನ್ನ ಗರ್ಭದಲ್ಲಿ ಜಲಜನಕವನ್ನು ಹೀಲಿಯಂ ಆಗಿ ರೂಪಾಂತರಿಸ ಲಾರಂಭಿಸುವುದೋ ಆಗಲೇ ಅದಕ್ಕೆ ತಾರಾಪಟ್ಟ ಪ್ರಾಪ್ತವೆನ್ನಿ. ಸೂರ್ಯನ ಉಗಮವೂ ಹೀಗೆಯೇ ಆಗಿದೆ. ಸೂರ್ಯ ಒಂದು ಬೃಹತ್ ಅನಿಲ ಗೋಳ. ಕೇಂದ್ರದಲ್ಲಿ ತಿರುಳು. ಅಲ್ಲಿ ಅನವರತ ಬೈಜಿಕ ಸಂಲಯನ. ಜಲಜನಕ ಹೀಲಿಯಂ ಆಗಿ ಪರಿವರ್ತನೆಗೊಳ್ಳುತ್ತಲೆ ಶಕ್ತಿಯ ಬಟವಾಡೆ. ಅಬ್ಬ ಸುಮಾರು ಐದು ಬಿಲಿಯನ್ ವರ್ಷಗಳಿಂದ ನಿರಂತರ ಕಾರ್ಯತತ್ಪರ ಕುಲುಮೆ. ಒಂದೆಡೆ ತಾರೆಗಳು ಜನ್ಮ ತಾಳುತ್ತಿದ್ದರೆ ಮತ್ತೂಂದೆಡೆ ಅಸುನೀಗುತ್ತಿರುತ್ತವೆ. ದೈತ್ಯ ನಕ್ಷತ್ರವೊಂದರ ತಿರುಳನ್ನು ಬೈಜಿಕ ಸಂಲಯನ ಅದರದೇ ಗುರುತ್ವದಿಂದ ಪಾರಾಗಿಸಲು ಆಗದಿರ ಬಹುದು. ಅಂಥ ಸನ್ನಿವೇಶದಲ್ಲಿ ತಿರುಳು ಸ್ಫೋಟಗೊಂಡು ಸೂಪರ್ ನೋವಾ ಆದೀತು. ಆ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿ ಎಷ್ಟು ಗೊತ್ತೇ? ಸೂರ್ಯ ನಂಥ ತಾರೆ ತನ್ನ ಜೀವಮಾನದಲ್ಲಿ ಬಿತ್ತರಿಸುವ ಒಟ್ಟು ಶಕ್ತಿಯ ಹಲವು ಪಟ್ಟು! ಸೂರ್ಯನ ಆಯುಷ್ಯ ಹತ್ತು ಬಿಲಿಯನ್ ವರ್ಷಗಳು. ಈಗ ಅವನಿಗೆ ನಡು ವಯಸ್ಸು. ಚಿಂತೆ ಬೇಡ! ಮತ್ತೂ 5 ಬಿಲಿಯನ್ ವರ್ಷಗಳಿವೆ. ಆಯುಷ್ಯದ ಉತ್ತ ರಾರ್ಧದಲ್ಲಿ ಕಾಲಕ್ರಮೇಣ ಕೆಂಪೇರಿಯಾನು. ತನ್ನ ಪ್ರಖರತೆಯನ್ನು 2000 ಪಟ್ಟು ಹೆಚ್ಚಿಸಿಕೊಳ್ಳುವನು. ಸೀಮೆಣ್ಣೆ ಒಲೆ ಸೀಮೆಣ್ಣೆ ಖಾಲಿಯಾದಂತೆ ಕೆಂಪಗೆ ಉರಿದಂತೆ. ಕಡೆಗೊಂದು ದಿನ ಅಂತ್ಯವಾಗಲೇಬೇಕಲ್ಲ-“ಜಾತಸ್ಯ ಮರಣಮ್ ಧ್ರುವಮ್’.
ಇದೀಗ ಚಿತ್ರವಾಗಿ ದಕ್ಕಿರುವ “ಕೃಷ್ಣ ವಿವರ’ ಮೆಸಿಯರ್ ನಕ್ಷತ್ರ ರಾಶಿಯ ಕೇಂದ್ರದಲ್ಲಿದೆ. ಸುತ್ತಲ ಪ್ರಕಾಶಯುತ ಬಳೆಯನ್ನು ಹೋಲುವ ವಲಯದಿಂದಷ್ಟೆ ಅದನ್ನು ಗುರುತಿಸಬಹುದು. ಈ ವಲಯವನ್ನು “ಘಟನಾ ಕ್ಷಿತಿಜ’ (ಇವೆಂಟ್ ಹೊರೈಸನ್) ಎನ್ನುತ್ತಾರೆ. ಈ ಮಿತಿಯೊಳಗೆ ಬೆಳಕು ಹೊರಗೆ ಹಾಯದು. ಆ ಗಡಿಯಲ್ಲೋ ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳು, ಮೇಘಗಳು, ಪ್ಲಾಸ್ಮ ಅಥವಾ ಅಯಾನೀಕೃತ ಅನಿಲಗಳದ್ದೇ ಕಾರುಬಾರು. ಘಟನಾ ಕ್ಷಿತಿಜ ಗೋಚರ ಬೆಳಕನ್ನೊಳಗೊಂಡಂತೆ ಎಲ್ಲ ಬಗೆಯ ವಿಕಿರಣಗಳನ್ನೂ ಹೊರಸೂಸುತ್ತದೆ. ದೂರ ಭೂಮಿಯಿಂದ 55 ಮಿಲಿಯನ್ ಜ್ಯೋತಿರ್ವರ್ಷಗಳು. ದ್ರವ್ಯರಾಶಿಯೋ ಸೂರ್ಯನದರ ಆರೂವರೆ ಬಿಲಿಯನ್ಗಳಷ್ಟು. ಅದು ಸರಿ, ಫೋಟೋ ತೆಗೆಯಲು ಅದು ದಕ್ಕಿದ್ದು ಹೇಗೇ? ಬಳಸಿದ್ದು ಒಂದಲ್ಲ….ಜಗತ್ತಿನ ನಿರ್ದಿಷ್ಟ ಕಡೆಗಳಲ್ಲಿ ನೆಲೆಗೊಳಿಸುವುದೇನು ಸಾಮಾನ್ಯದ ಮಾತೆ? ಅದೂ ಪರಮಾಣು ಗಡಿಯಾರ ಸಜ್ಜಿತ ರೇಡಿಯೋ ದೂರದರ್ಶಕಗಳು. ನಿಜಕ್ಕೂ ದೂರದರ್ಶಕದ ಮೂಲಕ ಕಪ್ಪು ರಂಧ್ರ ಕಾಣುವುದು ಕನಸೇ ಆಗಿತ್ತು. ಅಳವಡಿಸಿದ ತಂತ್ರಜ್ಞಾನ ವಿ.ಎಲ್.ಬಿ.ಐ.
( ವೆರಿ ಲಾಂಗ್ ಬೇಸ್ಲೈನ್ ಇಂಟೆರ್ ಫೆರೊಮೆಟ್ರಿ). ಏಕ ಕಾಲದಲ್ಲಿ ಚಿತ್ರಗಳನ್ನು ತೆಗೆದರು. ಎಲ್ಲ ಬಿಂಬಗಳನ್ನೂ ಸಂಕಲಿಸಿ ಒಂದೇ ಚಿತ್ರವಾಗಿಸಿದರು. ದೊರಕಿದ ಫಲದಲ್ಲಿ ಅಸ್ಪಷ್ಟತೆಯಿದೆ. ಕಪ್ಪು ಕುಳಿ ಎಷ್ಟಾದರೂ 55 ಮಿಲಿಯನ್ ಜೋತಿರ್ವರ್ಷಗಳ ದೂರದ್ದು! ಛಾಯಾ ಚಿತ್ರದಲ್ಲಿ ಕಾಣುತ್ತಿದೆಯಲ್ಲ ಕಪ್ಪು ಭಾಗ, ಅದರ ವ್ಯಾಸ 25 ಮಿಲಿಯನ್ ಮೈಲಿಗಳು! ಇಂಥದ್ದೊಂದು ಛಾಯಾಚಿತ್ರಕ್ಕಾಗಿ ತಾನೆ ಎಲ್ಲರೂ ನೋಡಬೇಕು, ನೋಡಿಯೇ ಬಿಡಬೇಕು ಅಂತ ಶತಮಾನಗಳಿಂದಲೂ ಕಾದಿದ್ದು. ಮನುಷ್ಯನಿಗೆ ದಕ್ಕದ್ದಿಲ್ಲ. “ನಾವು ಕಾಣಲಾಗದ್ದನ್ನು ಕಂಡೆವು’ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಶೆಪರ್ಡ್ ದೊಲೈಮನ್ಎಪ್ರಿಲ್ 10 ರಂದೇ ಪತ್ರಿಕಾಗೋಷ್ಠಿಯಲ್ಲಿ ಉದ್ಗರಿಸಿದರು. ಬ್ರಹ್ಮಾಂಡದ ಅನ್ವೇಷಣೆ, ಆವಿಷ್ಕಾರ ಮತ್ತು ಅರ್ಥೈಸಿಕೊಳ್ಳುವಿಕೆಗೆ ಇದೊಂದು ಐತಿಹಾಸಿಕ ತಿರುವು.
ಬಿಂಡಿಗನವಿಲೆ ಭಗವಾನ್