Advertisement

ಕೇದಾರನಾಥ: ಸೌಂಡ್‌ ಪ್ರೂಫ್ ತರಗತಿಗಳು

06:00 AM Sep 30, 2018 | Team Udayavani |

ನವದೆಹಲಿ: ಜನಪ್ರಿಯ ತೀರ್ಥಕ್ಷೇತ್ರ ಕೇದಾರನಾಥ ಪ್ರಾಂತ್ಯದಲ್ಲಿನ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳು ಸಿದ್ಧಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಹೊಸ ಪುಳಕ ತಂದಿದೆ.
 
ವರ್ಷಕ್ಕೊಮ್ಮೆ 6 ತಿಂಗಳ ಕಾಲ ನಡೆಯುವ ಚಾರ್‌ ಧಾಮ್‌ ಯಾತ್ರೆ ವೇಳೆ ಕೇದಾರನಾಥಕ್ಕೆ ಹಲವರು ಹೆಲಿಕಾಪ್ಟರ್‌ಗಳ ಮೂಲಕ ಭೇಟಿ ನೀಡುತ್ತಾರೆ. ದಿನ‌ಕ್ಕೆ 60 ಕಾಪ್ಟರ್‌ಗಳು ಸಂಚರಿಸುವಾಗಲೆಲ್ಲಾ ತರಗತಿ ಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕಿರಿಕಿರಿಯಾ ಗುತ್ತಿತ್ತು. ಇದನ್ನು ರುದ್ರಪ್ರಯಾಗ ಜಿಲ್ಲಾಡಳಿತದ ಗಮನಕ್ಕೆ ತರಲಾಗಿ, ಕಾಪ್ಟರ್‌ ಕಂಪನಿಗಳ ಜತೆ ಮಾತು ಕತೆ ನಡೆದಿತ್ತು. ಪರಿಣಾಮ, ಕಾಪ್ಟರ್‌ ಶಬ್ದದಿಂದ ತೊಂದರೆಗೊಳಗಾಗುವ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next