Advertisement

ಶಾಲಾ ಶೌಚಾಲಯ ಸ್ವಚ್ಛತೆ ಎಸ್ ಡಿಎಂಸಿ ಜವಾಬ್ದಾರಿ: ಸಚಿವ ಮಧು ಬಂಗಾರಪ್ಪ

03:24 PM Dec 29, 2023 | Team Udayavani |

ಶಿವಮೊಗ್ಗ: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಚಾರದ ಬಗ್ಗೆ ನೋಟಿಫಿಕೇಶನ್ ಹೊರಡಿಸುತ್ತಿದ್ದೇವೆ. ಶಾಲೆಯಲ್ಲಿ ಸ್ವಚ್ಛತೆ ಕೊರತೆ ಸಹ ಇದೆ. ಶೌಚಾಲಯ ಸ್ವಚ್ಛತೆಯು ಜವಾಬ್ದಾರಿ ಎಸ್ ಡಿಎಂಸಿ ತಗೆದುಕೊಳ್ಳಬೇಕು. ಕೇವಲ ಶಿಕ್ಷಕರ ಜವಾಬ್ದಾರಿ ಅಲ್ಲ, ಎಸ್ ಡಿಎಂಸಿ ಸಹ ಜವಾಬ್ದಾರಿ ಹೊರಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಕುಪ್ಪಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಮತ್ತೆ ನಡೆದರೆ ಇಲಾಖೆಯು ಕಠಿಣವಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಕ್ಕಳಿಂದ ‌ಯಾವುದೇ ಕೆಲಸ ಮಾಡಿಸಬಾರದು. ಮಕ್ಕಳಿಂದ ಕೇವಲ ವ್ಯಾಸಂಗ ಮಾಡಿಸಬೇಕು ಅಷ್ಟೇ. ಈ ಘಟನೆಗಳು ಇಲಾಖೆಗೆ, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾರಣವಾಗುತ್ತಿದೆ ಎಂದರು.

ಡಿಸಿಎಂ ಚರ್ಚೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರವರು ಸ್ವಂತವಾಗಿ ಏನೇನು ಚರ್ಚೆ ಮಾಡುತ್ತಾರೆ. ಹೈಕಮಾಂಡ್ ಇದೆ, ಅದು ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಕುವೆಂಪು ಪ್ರತಿಷ್ಠಾನಕ್ಕೆ ಏನೇನು ಕೆಲಸ ಆಗಬೇಕು ಅದು ಮಾಡುತ್ತೇನೆ. ಕುವೆಂಪು ಅವರಿಗೆ ಗೌರವ ಕೊಟ್ಟರೆ ಇಡಿ ರಾಜ್ಯಕ್ಕೆ ಗೌರವ ಕೊಟ್ಟ ಹಾಗೆ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next