Advertisement

ಎಸ್‌ಸಿಡಿಸಿಸಿ ಬ್ಯಾಂಕ್‌: ಸತೀಶ್‌ ಅವರಿಗೆ ವಿದಾಯ

12:31 PM Jul 05, 2018 | Harsha Rao |

ಉಡುಪಿ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್‌ ಎಸ್‌.ನಿವೃತ್ತರಾದ ಹಿನ್ನೆಲೆಯಲ್ಲಿ ಬ್ಯಾಂಕಿನ ನಿವೃತ್ತ ನೌಕರರ ಸಂಘದ ವತಿಯಿಂದ ಅವರಿಗೆ ವಿದಾಯ ಸಮಾರಂಭ ಜರಗಿತು.
ಸಂಘದ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತೀಶ್‌ ಅವರು ಬ್ಯಾಂಕಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಬ್ಯಾಂಕಿನ ಪ್ರಗತಿಯೊಂದೇ ಪ್ರಮುಖ ಧ್ಯೇಯವಾಗಿತ್ತು ಎಂದರು.  

Advertisement

ಲಕ್ಷ್ಮಣಕುಮಾರ್‌ ಮಲ್ಲೂರು, ನಿತ್ಯಾನಂದ ಕಾರಂತ ಮಾತನಾಡಿದರು. ಬಳಿಕ ಸತೀಶ್‌ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಎಂ. ಉಗ್ಗಪ್ಪ ಶೆಟ್ಟಿ, ಪ್ರ.ಕಾರ್ಯದರ್ಶಿ ಕೆ. ರಾಮಚಂದ್ರ ಹೊಳ್ಳ, ಜತೆ ಕಾರ್ಯದರ್ಶಿ ಎನ್‌. ಮೋಹನ್‌ ಹೆಗ್ಡೆ, ಖಜಾಂಚಿ ಎಸ್‌. ಜಯರಾಮ ಶೆಟ್ಟಿ, ನಿರ್ದೇಶಕ ಗೋಪಾಲಕೃಷ್ಣ ಮಯ್ಯ, ದೀನನಾಥ ರೈ, ಬಿ. ಅನಂತರಾಮ ಭಟ್‌, ರೋಹಿಣಿ ಬಾೖ, ಸುಮಿತ್ರಾ ಎ., ಲಕ್ಷ್ಮಣ ಶೆಟ್ಟಿ, ಮಾಜಿ ವ್ಯವಸ್ಥಾಪನ ನಿರ್ದೇಶಕರಾದ ಇಂದಿರಾ ಕುಮಾರಿ, ನಾರಾಯಣ ಕಾಮತ್‌, ಕೆ. ದಿನಕರ್‌, ಗೌರವ ಆಹ್ವಾನಿತರಾದ ದೇವದಾಸ್‌, ಶಾಂತಾ ರಾಮ ಕಿಣಿ, ಪ್ರೇಮಾ ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next