Advertisement

Udupi ಹಣ ದ್ವಿಗುಣಗೊಳಿಸುವುದಾಗಿ ವಂಚನೆ

11:57 PM Nov 01, 2023 | Team Udayavani |

ಉಡುಪಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.

Advertisement

ಮಹಾಬಲೇಶ್ವರ ಮಾರಣಕಟ್ಟೆ ಅವರ ಮೊಬೈಲ್‌ಗೆ ಜು.1ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಸಂದೇಶ ಕಳುಹಿಸಿದ್ದು, ಆ ಸಂದೇಶದಲ್ಲಿ ಆತನು ಕಳುಹಿಸಿರುವ ಲಿಂಕ್‌ ಮೂಲಕ ಟ್ರೆಡಿಂಗ್‌ ವ್ಯವಹಾರ ನಡೆಸಿದರೆ ಹೂಡಿದ ಹಣವನ್ನು ದ್ವಿಗುಣಗೊಳಿಸಿ ನೀಡುವುದಾಗಿ ನಂಬಿಸಿದ್ದನು. ಅದರಂತೆ ಆ ವ್ಯಕ್ತಿ ಮಹಾಬಲೇಶ್ವರ ಮಾರಣಕಟ್ಟೆಯನ್ನು ನಂಬಿಸಿ ಯಾವುದೋ ಒಂದು ಶಾಖೆಯ ಖಾತೆ ಸಂಖ್ಯೆಯನ್ನು ನೀಡಿದ್ದು ಆ ಖಾತೆಗೆ ಮಹಾಬಲೇಶ್ವರ ಮಾರಣಕಟ್ಟೆ ಅವರು ಜು. 21ರಂದು 90,000 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದರು.

ಆದರೆ ಆರೋಪಿ ಹಣಕ್ಕೆ ಲಾಭಾಂಶ ನೀಡದೇ, ಹೂಡಿದ ಹಣವನ್ನು ಹಿಂದಿರುಗಿಸದೇ ನಷ್ಟ ಉಂಟು ಮಾಡಿರುವುದಾಗಿ ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next