Advertisement

ಎಸ್ಸಿ,ಎಸ್ಟಿ: ಸುಪ್ರೀಂ ಸಮರ್ಥನೆ

06:45 AM May 17, 2018 | |

ಹೊಸದಿಲ್ಲಿ: ಎಸ್ಸಿ,ಎಸ್ಟಿ ಕಾಯ್ದೆಯ ದುರುಪಯೋಗಕ್ಕೆ ಪರೋಕ್ಷ ಅನುಕೂಲ ಕಲ್ಪಿಸುವುದು ಈ ದೇಶದ ಸಂಸತ್ತಿಗೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಖಡಕ್ಕಾಗಿ ಹೇಳಿದೆ.

Advertisement

ಮಾ. 20ರಂದು ಎಸ್ಸಿ, ಎಸ್ಟಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮ ನವಿ ಸಲ್ಲಿಸಿರುವ ಕೇಂದ್ರ ಸರಕಾರ, ಜನರ ಒಳಿತಾಗಿ ಸರಕಾರ ರೂಪಿಸುವ ಕಾನೂನುಗಳಲ್ಲಿ ನ್ಯಾಯಾಂಗವು ಹಸ್ತ ಕ್ಷೇಪ ಮಾಡುವಂತಿಲ್ಲ ಎಂದು ವಾದಿಸಿತ್ತು.

ಈ ವಾದಕ್ಕೆ ಗುರುವಾರ, ನ್ಯಾಯಮೂರ್ತಿಗಳಾದ ಆದರ್ಶ್‌ ಗೋಯೆಲ್‌ ಮತ್ತು ಯು.ಯು.ಲಲಿತ್‌ ಅವರುಳ್ಳ ನ್ಯಾಯ ಪೀಠ, “”ಕಾಯ್ದೆಗಳಡಿ, ಒಬ್ಬ ನಿರ್ದೋಷಿಯನ್ನು ಜೈಲಿನಲ್ಲಿರುವುದಾದರೆ ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿಲ್ಲ ವೆಂದೇ ಅರ್ಥ. ಹಾಗಾಗಿ, ಎಸ್ಸಿ,ಎಸ್ಟಿ ಕಾಯ್ದೆಗೆ ತಿದ್ದು ಪಡಿ ತರಲಾಗಿದೆ ಎಂದು ತನ್ನ ತೀರ್ಪನ್ನು ಸಮರ್ಥಿಸಿ ಕೊಂಡಿತು. ಏತ ನ್ಮಧ್ಯೆ, ನ್ಯಾಯಪೀಠದಲ್ಲಿರುವ ನ್ಯಾ| ಗೋಯೆಲ್‌, ಜುಲೈ 6ರಂದು ನಿವೃತ್ತಿ ಹೊಂದಲಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next