Advertisement

ಬಿ.ಎಚ್‌.ಲೋಯಾ ಸಾವಿನ ಸ್ವತಂತ್ರ ತನಿಖೆ ಅಗತ್ಯವಿಲ್ಲ ಎಂದ ಸುಪ್ರೀಂ 

04:19 PM Apr 19, 2018 | Team Udayavani |

ಹೊಸದಿಲ್ಲಿ: ಸಿಬಿಐ ವಿಶೇಷ ಕೋರ್ಟ್‌ ಜಡ್ಜ್ ಬಿ.ಎಚ್‌.ಲೋಯಾ ಸಾವಿನ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾ ಮಾಡಿದೆ. 

Advertisement

‘ನ್ಯಾ.ಲೋಯಾ ಅವರದ್ದು ಸಹಜ ಸಾವು ಎನ್ನುವುದು ತನಿಖೆಯಿಂದ ಧೃಡಪಟ್ಟಿದೆ.ನ್ಯಾ.ಲೋಯಾ ಜೊತೆಗಿದ್ದ ನಾಲ್ವರು ನ್ಯಾಯಾಧೀಶರ ಹೇಳಿಕೆಗಳನ್ನು ಅನುಮಾನಿಸಲು ಸಾಧ್ಯವಿಲ್ಲ. ನಿಷ್ಪ್ರಯೋಜಕ ಮತ್ತು ಪ್ರೇರೇಪಿತ ಅರ್ಜಿಗಳನ್ನು ಬೆಂಬಲಿಸಲಾಗುವುದಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಜಸ್ಟಿಸ್‌ ದೀಪಕ್‌ ಮಿಶ್ರಾ,ಜಸ್ಟಿಸ್‌ ಡಿ.ವೈ.ಚಂದ್ರಚೂಡ್‌ ಮತ್ತು ಖಾನ್‌ವಿಲ್ಕರ್‌  ಅವರ ತ್ರಿಸದಸ್ಯ ಪೀಠ ಮೇಲ್ಮನವಿ ಸಲ್ಲಿಸಿರುವ ಉದ್ದೇಶವನ್ನು ಪ್ರಶ್ನಿಸಿದ್ದು, ಇದು ನ್ಯಾಯಾಂಗದ ಮೇಲಾಗಿರುವ ದಾಳಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next