Advertisement

ರಾಮ್‌ ಕೀ ಜನ್ಮಭೂಮಿ ಚಿತ್ರ ಬಿಡುಗಡೆ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

09:10 AM Mar 29, 2019 | Team Udayavani |

ಹೊಸದಿಲ್ಲಿ :: ಇದೇ ಮಾರ್ಚ್‌ 29ರಂದು ದೇಶಾದ್ಯಂತ ತೆರೆ ಕಾಣಲಿರುವ ರಾಮ್‌ ಕೀ ಜನ್ಮಭೂಮಿ ಚಿತ್ರದ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Advertisement

ಈ ಚಿತ್ರವು ತೆರೆಕಂಡಲ್ಲಿ ಪ್ರಕೃತ ಸಾಗುತ್ತಿರುವ ಅಯೋಧ್ಯೆ ಭೂವಿವಾದ ಸಂಧಾನ ಮಾತುಕತೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿ ಚಿತ್ರಕ್ಕೆ ತಡೆ ನೀಡಬೇಕು ಎಂದು ಕೋರಿದ ಅರ್ಜಿಯು ಇಂದು ಜಸ್ಟಿಸ್‌ ಎಸ್‌ ಎ ಬೋಬಡೆ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂತು.

ರಾಮ್‌ ಕೀ ಜನ್ಮಭೂಮಿ ಚಿತ್ರ ಬಿಡುಗಡೆಗೂ ಅಯೋಧ್ಯೆ ಭೂವಿವಾದ ಸಂಧಾನ ಮಾತುಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಸುಪ್ರೀಂ ಪೀಠ, ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಬಳಿಕ ನಿಗದಿಸಲು ಸೂಚಿಸಿತು.

ರಾಮ ಕೀ ಜನ್ಮಭೂಮಿ ಚಿತ್ರವನ್ನು ಸನೋಜ್‌ ಮಿಶ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯನ್ನು ವಿವಾದಾತ್ಮಕ ರಾಮ ಮಂದಿರ ಕುರಿತಾಗಿ ಹೆಣೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next