Advertisement

ಕುಲಾಂತರಿ ಸಾಸಿವೆ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್‌

08:24 PM Nov 04, 2022 | Team Udayavani |

ನವದೆಹಲಿ: ಸಾಸಿವೆಯ ಕುಲಾಂತರಿ ತಳಿಯ ಬಿಡುಗಡೆಗೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.

Advertisement

ಜತೆಗೆ, ನ.10ರವರೆಗೆ ಈ ವಿಚಾರದಲ್ಲಿ ನಾವು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಜಿಎಂ ಸಾಸಿವೆಯ ಬಿಡುಗಡೆಗೆ ಕೇಂದ್ರ ಪರಿಸರ ಸಚಿವಾಲಯವು ಅನುಮತಿ ನೀಡಿ, ಕ್ಷೇತ್ರ ಪರೀಕ್ಷೆಗೆ ಒಪ್ಪಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜೀನ್‌ ಕ್ಯಾಂಪೇನ್‌ ಮತ್ತು ಅರುಣಾ ರೋಡ್ರಿಗಸ್‌ ನೇತೃತ್ವದ ಹೋರಾಟಗಾರರ ಸಮೂಹವು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next