Advertisement

ಆಮ್ರಪಾಲಿ ಸಮೂಹದ ಕಟ್ಟಡಗಳನ್ನು ಸೀಲ್‌ ಮಾಡಲು ಸುಪ್ರೀಂ ಆದೇಶ

04:32 PM Oct 10, 2018 | udayavani editorial |

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ಇಂದು ನೋಯ್ಡಾ, ಗ್ರೇಟರ್‌ ನೋಯ್ಡಾ ಮತ್ತು ಬಿಹಾರದ ರಾಜಗಿರ್‌ ಮತ್ತು ಬಕ್ಸಾರ್‌ ನಲ್ಲಿನ ಆಮ್ರಪಾಲಿ ಕಟ್ಟಡಗಳನ್ನು ಸೀಲ್‌ ಮಾಡುವಂತೆ ಆದೇಶಿಸಿದೆ. 

Advertisement

ಈ ಕಟ್ಟಡಗಳಲ್ಲಿ ತಮ್ಮ ಸಮೂಹದ ಎಲ್ಲ 46 ಕಂಪೆನಿಗಳ ದಾಖಲೆಗಳು ಇವೆ ಎಂದು ಆಮ್ರಪಾಲಿ ನಿರ್ದೇಶಕರು ಕೋರ್ಟಿಗೆ ತಿಳಿಸಿದ ಕಾರಣ ಕೋರ್ಟ್‌, ಆ ಕಟ್ಟಡಗಳನ್ನು ಸೀಲ್‌ ಮಾಡುವಂತೆ ಆದೇಶಿಸಿತು. 

ಆಮ್ರಪಾಲಿ ಸಮೂಹ ತನ್ನ ಎಲ್ಲ ದಾಖಲೆಗಳನ್ನು ಕೋರ್ಟ್‌ ನಿಂದ ನೇಮಕಗೊಂಡಿರುವ ಫೊರೆನ್ಸಿಕ್‌ ಆಡಿಟರ್‌ ಗಳಿಗೆ ಒಪ್ಪಿಸದಿದ್ದ ಕಾರಣ ನಿನ್ನೆ ಮಂಗಳವಾರ ಸುಪ್ರೀಂ ಕೋರ್ಟ್‌  ಆಮ್ರಪಾಲಿ ಸಮೂಹದ ಸಿಎಂಡಿ ಅನಿಲ್‌ ಕುಮಾರ್‌ ಶರ್ಮಾ, ಮತ್ತು ಇಬ್ಬರು ನಿರ್ದೇಶಕರುಗಳಾದ ಶಿವ ಪ್ರಿಯ ಮತ್ತು ಅಜಯ್‌ ಕುಮಾರ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next