Advertisement

ನಮಗೆ ಲಿಖಿತ ಭರವಸೆ ಕೊಡಿ: ಸಂಧಾನಕಾರರಿಗೆ ಶಹೀನಾ ಬಾಗ್ ಪ್ರತಿಭಟನಾಕಾರರ ಆಗ್ರಹ

10:13 AM Feb 23, 2020 | Nagendra Trasi |

ನವದೆಹಲಿ: ಸಿಎಎ ವಿರೋಧಿ ಹೋರಾಟ ನಡೆಸುತ್ತಿರುವ ಶಹೀನ್ ಬಾಗ್ ಹೋರಾಟಗಾರರ ಜತೆ ಸಂಧಾನಕ್ಕೆ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಾಧನಾ ರಾಮಚಂದ್ರನ್ ಮೂರನೇ ದಿನವೂ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದರು ಎಂದು ವರದಿ ತಿಳಿಸಿದೆ.

Advertisement

ಮಾಧ್ಯಮದವರನ್ನು ಹೊರತುಪಡಿಸಿ ಪ್ರತಿಭಟನಾಕಾರರ ಜತೆ ಮಾತನಾಡುವುದಾಗಿ ರಾಮಚಂದ್ರನ್ ತಿಳಿಸಿದ್ದು, ಅಸಹ್ಯ ಹುಟ್ಟಿಸುವ ಕಮೆಂಟ್ ಮಾಡುತ್ತಿರುವ ಜನರನ್ನು ಶಿಕ್ಷಿಸಬೇಕು ಎಂದು ಮಹಿಳಾ ಪ್ರತಿಭಟನಾಕಾರರೊಬ್ಬರು ತಿಳಿಸಿದ್ದು, ಇಂತಹ ಕಮೆಂಟ್ ಮುಂದೆ ಬಾರದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಪ್ರತಿಭಟನಾಕಾರರ ರಕ್ಷಣೆ ಮತ್ತು ಭದ್ರತೆ ಬಗ್ಗೆ ಲಿಖಿತ ಭರವಸೆ ಬೇಕು ಎಂದು ಪ್ರತಿಭಟನಾಕಾರರು ಸಂಧಾನಕಾರರಾದ ರಾಮಚಂದ್ರನ್ ಅವರ ಬಳಿ ಹೇಳಿರುವುದಾಗಿ ವರದಿ ತಿಳಿಸಿದೆ. ದೇಶದ್ರೋಹಿಗಳನ್ನು ಗುಂಡಿಟ್ಟು ಸಾಯಿಸಿ ಎಂದು ಹೇಳಿದ ವ್ಯಕ್ತಿಯನ್ನು ಶಿಕ್ಷಿಸಬೇಕು. ಯಾರು ಅಸಹ್ಯ ಹುಟ್ಟಿಸುವ ಪ್ರತಿಕ್ರಿಯೆ ನೀಡಿದ್ದಾರೋ ಅವರಿಗೂ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್ ಇದೀಗ ಹೊಣೆಗಾರಿಕೆ ತೆಗೆದುಕೊಂಡಿದ್ದು, ಏನಾದರು ಪರಿಹಾರ ಸಿಗಬಹುದು. ಎಎಂಯು ಮತ್ತು ಜೆಎನ್ ಯು ನಲ್ಲಿ ಪೊಲೀಸ್ ಕ್ರೌರ್ಯವನ್ನು ನೋಡಿದ್ದೇವೆ. ಹೀಗಾಗಿ ನಮಗೆ ಲಿಖಿತ ಭರವಸೆ ಬೇಕು. ನಮಗೆ ಪೊಲೀಸ್ ರಕ್ಷಣೆಯೂ ಕೊಡಬೇಕು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next