Advertisement

ಉದ್ಯಮಿ ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್‌ ಕೊನೆ ಅವಕಾಶ

09:45 PM Feb 10, 2022 | Team Udayavani |

ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ಮೋಸ ಮಾಡಿ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್‌ ಮುಂದೆ ಹಾಜರಾಗಲು ಕೊನೆಯ ಅವಕಾಶ ಕೊಡಲಾಗಿದೆ.

Advertisement

ಫೆ.24ರಂದು ಮಲ್ಯಗೆ ಸುಪ್ರೀಂ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಮತ್ತು ಎಸ್‌.ರವೀಂದ್ರ ಭಟ್‌ ಅವರನ್ನೊಳಗೊಂಡ ನ್ಯಾಯಪೀಠವು ಈ ಸೂಚನೆ ಕೊಟ್ಟಿದೆ.

ನ್ಯಾಯಾಲಯವು ಮಲ್ಯ ಅವರನ್ನು ದೋಷಿ ಎಂದು ಪರಿಗಣಿಸಿದೆ ಮತ್ತು ಶಿಕ್ಷೆ ನೀಡಲು ನಿರ್ಧರಿಸಿದೆ. ಆದರೆ ಅವರು ಈವರೆಗೆ ನ್ಯಾಯಾಲಯದ ಎದುರು ಹಾಜರಾಗದ ಹಿನ್ನೆಲೆ ಅವರ ವಾದವನ್ನು ಕೇಳಲಾಗಿಲ್ಲ.

ಇದನ್ನೂ ಓದಿ:ಕೋವಿಡ್ ದಿಂದಾಗಿ ವಿದೇಶಗಳಲ್ಲಿ 4,355 ಭಾರತೀಯರ ಸಾವು

Advertisement

ಇದೀಗ ಕೊನೆಯ ಅವಕಾಶ ಕೊಡಲಾಗುತ್ತಿದೆ. ಒಂದು ವೇಳೆ ಫೆ.24ಕ್ಕೆ ಅವರು ಹಾಜರಾಗದಿದ್ದರೆ, ಅವರ ಗೈರು ಹಾಜರಿಯಲ್ಲೇ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next