Advertisement

ಕಂಬಳಕ್ಕೆ ಮಧ್ಯಾಂತರ ತಡೆಯಾಜ್ಞೆ ಇಲ್ಲ

08:20 AM Feb 13, 2018 | Team Udayavani |

ಹೊಸದಿಲ್ಲಿ: ಕಂಬಳಕ್ಕೆ ಮಧ್ಯಾಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಕರ್ನಾಟಕ ಸರಕಾರ ಅಧ್ಯಾದೇಶ ಮೂಲಕ ಕಂಬಳಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಪೇಟಾ ಸಂಘಟನೆ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಮಧ್ಯಾಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಜತೆಗೆ ಮಾ.12ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸುವುದಾಗಿ ಹೇಳಿದೆ.

Advertisement

ಪೇಟಾ ಪರ ವಾದ ಮಂಡಿಸಿದ ಸಿದ್ಧಾರ್ಥ ಲೂಥಾ, ಕರ್ನಾಟಕ ಸರಕಾರ ಹೊರಡಿಸಿದ ಅಧ್ಯಾದೇಶದ ಅವಧಿ ಈಗ ಮುಕ್ತಾಯವಾಗಿದೆ. ಹೀಗಾಗಿ ಅದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ ಎಂದು ಪ್ರತಿ ಪಾದಿಸಿದರು. ಆದರೆ ಈ ವಾದವನ್ನು ನ್ಯಾಯಪೀಠ ಒಪ್ಪದೆ, ಮಧ್ಯಾಂತರ ತಡೆಯಾಜ್ಞೆಗೆ ನಿರಾಕರಿಸಿತು.

ಕಳೆದ ವರ್ಷದ ಜ. 28ರಂದು ಕರ್ನಾಟಕ ಸರಕಾರ ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಗೆ ತಿದ್ದುಪಡಿ ತಂದು ಅಧ್ಯಾದೇಶ ಹೊರ ಡಿಸಿತ್ತು.  ಅದನ್ನು ಪೇಟಾ ಮಾತ್ರವಲ್ಲದೆ, ಎಫ್ಐಎಪಿಒ ಎಂಬ ಸಂಘಟನೆಯೂ ವಿರೋಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next