Advertisement

ಅಯೋಧ್ಯೆ –ಬಾಬರಿ ವಿವಾದ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

12:12 PM Nov 12, 2018 | Team Udayavani |

ಹೊಸದಿಲ್ಲಿ : ರಾಮ ಜನ್ಮಭೂಮಿ – ಬಾಬರಿ ಮಸೀದಿ ವಿವಾದಿತ ಸ್ಥಳದ ಒಡೆತನ ಯಾರಿಗೆ ಸೇರಿದ್ದೆಂಬ ಕೇಸಿನ ವಿಚಾರಣೆಯನ್ನು ಬೇಗನೆ ಕೈಗೆತ್ತಿಕೊಳ್ಳಬೇಕೆಂದು ಕೋರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದ ಸೋಮವಾರ ತಿರಸ್ಕರಿಸಿತು.

Advertisement

ಈ ವಿಷಯವನ್ನು ಈಗಾಗಲೇ ಸೂಕ್ತ ಪೀಠದ ವಿಚಾರಣೆಗಾಗಿ ಜನವರಿ ತಿಂಗಳಿಗೆ ಲಿಸ್ಟ್‌ ಮಾಡಲಾಗಿದೆ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ಎಸ್‌ ಕೆ ಕೌಲ್‌ ಅವರನ್ನು ಒಳಗೊಂಡ ಪೀಠ ಸ್ಪಷ್ಟಪಡಿಸಿತು.

“ನಾವು ಈಗಾಗಲೇ ಆದೇಶವನ್ನು ಹೊರಡಿಸಿದ್ದೇವೆ; ಅಪೀಲುಗಳು ಜನವರಿಯಲ್ಲಿ ವಿಚಾರಣೆಗೆ ಬರಲಿವೆ; ಆದುದರಿಂದ ಈ ಹಂತದಲ್ಲಿ ತ್ವರಿತ ವಿಚಾರಣೆ ಕೋರಿಕೆಯನ್ನು ಮನ್ನಿಸಲಾಗದು’ ಎಂದು ಪೀಠ ಹೇಳಿತು.  ವಕೀಲ ಬರುನ್‌ ಕುಮಾರ್‌ ಸಿನ್ಹಾ ಅವರು ಅಖೀಲ ಭಾರತ ಹಿಂದೂ ಮಹಾಸಭಾ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next