Advertisement

ದಿಲ್ಲಿ-ಎನ್‌ಸಿಆರ್‌ ವಲಯ: ಹಳೆ ವಾಹನ ಪ್ರವೇಶಕ್ಕೆ ಸುಪ್ರೀಂ ನಿರ್ಬಂಧ

07:19 PM Oct 29, 2018 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ವಲಯದೊಳಗೆ 15 ವರ್ಷ ಹಳೆಯ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ಚಾಲಿತ ಮೋಟಾರು ವಾಹನಗಳನ್ನು ತರಕೂಡದು; ತಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂಬ ಖಡಕ್‌ ಸೂಚನೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಇಂದು ಸಾರಿಗೆ ಇಲಾಖೆಗೆ ನೀಡಿದೆ.

Advertisement

ದಿಲ್ಲಿ – ಎನ್‌ಸಿಆರ್‌ ವಲಯದಲ್ಲಿನ ವಾಯು ಮಾಲಿನ್ಯ ಪರಿಸ್ಥಿತಿ ಅತ್ಯಂತ ಹದಗೆಟ್ಟಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್‌, 15 ವರ್ಷ ಹಳೆಯ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ಚಾಲಿತ ಮೋಟಾರು ವಾಹನಗಳ ಪಟ್ಟಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎನ್‌ಸಿಆರ್‌ ಸಾರಿಗೆ ಇಲಾಖೆಯ ವೆಬ್‌ ಸೈಟ್‌ಗಳಲ್ಲಿ ಪ್ರಕಟಿಸುವಂತೆ ಆದೇಶಿಸಿತು. 

 ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತತ್‌ಕ್ಷಣವೇ ಸಾಮಾಜಿಕ ಮಾಧ್ಯಮ ಖಾತೆ ತೆರೆದು ಪೌರರಿಗೆ ಮಾಲಿನ್ಯದ ಬಗ್ಗೆ ದೂರು ನೀಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next