Advertisement
ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ 21 ತಿಂಗಳು ಭಯ ಹುಟ್ಟಿಸುವಂತಿತ್ತು. ಕೂಡು ಕುಟುಂಬದಲ್ಲಿ ಬದುಕುತ್ತಿದ್ದ ನಾವು, ಪುತ್ತೂರು ಪೇಟೆಯ ಕೊಂಬೆಟ್ಟು ಬಳಿ ಮನೆ ಮಾಡಿದ್ದೆವು. ಮನೆಯಲ್ಲಿ ನಾನು, ಮೂವರು ಮಕ್ಕಳು, ಭಾವನ ಇನ್ನಿಬ್ಬರು ಮಕ್ಕಳಷ್ಟೇ ಈ ಸಂದರ್ಭ ಇದ್ದೆವು. ಮನೆಗೆ ನೆಂಟರು, ನೆರೆಹೊರೆಯವರು ಬರುತ್ತಿರಲಿಲ್ಲ. ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಾರೆ ಎಂಬ ಭಯ. ಮನೆ ನಿರ್ವಹಣೆ ಜವಾಬ್ದಾರಿ ರಾಮ ಭಟ್ ಅವರ ಅಣ್ಣ ನಾರಾಯಣ ಭಟ್ ಅವರ ಹೆಗಲ ಮೇಲಿತ್ತು.
Related Articles
Advertisement
ಜನಸಂಘದ ಮುಂಚೂಣಿ ನಾಯಕ ದೀನ ದಯಾಳ್ ಉಪಾಧ್ಯಾಯ ಪಕ್ಷದ ಕೆಲಸಕ್ಕೆಂದು ಬಂದವರು ಒಂದೆರಡು ದಿನ ಮನೆಯಲ್ಲಿ ಉಳಿಯುತ್ತಿದ್ದರು. ಆಡ್ವಾಣಿ ಅವರು ಕೂಡ ಮನೆಗೆ ಬಂದಿದ್ದರು.
ಪ್ರಚಾರ ಕಾರ್ಯದಲ್ಲಿ ಭಾಗಿಪತಿಯ ರಾಜಕೀಯ ಜೀವನ ನೋಡಿಯೇ ಸಾಕಾಗಿತ್ತು. ಆದರೂ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದೇನೆ. ಕೆಲವರಿಂದ ಉತ್ತಮ ಪ್ರತಿಕ್ರಿಯೆ, ಸಾಗಹಾಕಿದವರೂ ಇದ್ದಾರೆ. ಇದರ ಪರಿಣಾಮವೋ ಏನೋ, ಪುತ್ತೂರು ಮಹಿಳಾ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, 8 ವರ್ಷ ಅಧ್ಯಕ್ಷೆಯಾಗಿ ದುಡಿಯಲು ಅವಕಾಶ ಸಿಕ್ಕಿತು. ಕಳೆದ ನಾಲ್ಕು ವರ್ಷದಿಂದ ವಿಶ್ರಾಂತಿಯಲ್ಲಿದ್ದೇನೆ. ರಾಮ ಭಟ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬ ತೃಪ್ತಿ ನನಗೆ ಆಗಲೇ ಇತ್ತು. ಹಲವರಿಗೆ ಸಹಾಯ ನೀಡಿದ್ದಾರೆ. ಸಹಾಯ ಪಡೆದವರು ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಆಗ ಹಳ್ಳಿ ಪ್ರದೇಶ ಹೆಚ್ಚು. ದೂರದೂರಿನಿಂದ ಬಂದವರು 4-5 ದಿನ ಮನೆಯಲ್ಲಿ ನಿಂತು ಹೋದವರಿದ್ದಾರೆ. ಆದರೂ ಆಗಿನ ರಾಜಕೀಯದಲ್ಲಿ ನೀತಿ, ನಿಯಮವಿತ್ತು. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದರು. ಈಗಿನ ರಾಜಕೀಯದಲ್ಲಿ ಇದ್ಯಾವುದೂ ಇಲ್ಲ. ಆದ್ದರಿಂದ ಬೇಸರ ಎನಿಸಿದೆ. ಹಿಡಿದ ಕೆಲಸವನ್ನು ಮಾಡಿ ತೀರಿಯೇ ಬಿಡಬೇಕು ಎಂಬ ಹಠವನ್ನು ಎಷ್ಟೋ ಬಾರಿ ರಾಮ ಭಟ್ ಅವರಲ್ಲಿ ಕಂಡಿದ್ದೇನೆ.
-ಕೆ. ಸವಿತಾ ಆರ್. ಭಟ್ ಗಣೇಶ್ ಕಲ್ಲರ್ಪೆ