Advertisement

Save West Bengal: ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಬಿಜೆಪಿ ನಾಯಕ

12:56 AM Mar 11, 2024 | Team Udayavani |

ಕೋಲ್ಕತಾ: ಬಂಗಾಲ ರಕ್ಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಮುಖಂಡ ಕೌಸ್ತವ್‌ ಬಗ್ಚಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಸಿಲಿಗುರಿಗೆ ಶನಿವಾರ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಕೌಸ್ತವ್‌ ಬಗ್ಚಿ, ಸ್ವತಃ ರಕ್ತದಲ್ಲಿ ಬರೆದ ಪತ್ರವನ್ನು ನೀಡಿ, ಕಳ್ಳರಿಂದ ಬಂಗಾಲವನ್ನು ರಕ್ಷಿಸು ವಂತೆ ಕೋರಿದರು. ಈ ಪತ್ರ ಸ್ವೀಕರಿಸಿದ ಪ್ರಧಾನಿ, ಮುಂದೆ ಈ ರೀತಿ ಮಾಡದಂತೆ ತಿಳಿ ಹೇಳಿದರು. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಕೌಸ್ತವ್‌ ಬಗ್ಚಿ, ಕಳೆದ ವರ್ಷ ಕೋಲ್ಕತಾ ಪೊಲೀಸರು ತನ್ನನ್ನು ಬಂಧಿಸಿರುವುದನ್ನು ವಿರೋಧಿಸಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next