Advertisement

“ರಕ್ಷಿಸೋಣ ಬನ್ನಿ ಕೂಡಲಸಂಗಮ’ಅಭಿಯಾನ

02:32 PM Oct 19, 2020 | sudhir |

ಕೂಡಲಸಂಗಮ: ಗ್ರಾಮದ 20ಕ್ಕೂ ಅಧಿಕ ಯುವಕರ ತಂಡ ಸಾಮಾಜಿಕ ಅಂತರದೊಂದಿಗೆ ಸಭಾ ಭವನ ಬಳಿಯ
ಉದ್ಯಾನವನದಲ್ಲಿಯ ಪಾಥೆìನಿಯಂ ಸಸಿ, ಕಸವನ್ನು ಕೀಳುವ ಮೂಲಕ ರವಿವಾರ ಬೆಳಗ್ಗೆ 8ರಿಂದ 8:30ರವರೆ‌ಗೆ ರಕ್ಷಿಸೋಣ ಬನ್ನಿ ಕೂಡಲಸಂಗಮ ಸ್ವತ್ಛತಾ ಅಭಿಯಾನ ನಡೆಸಿದರು.

Advertisement

ಅಭಿಯಾನವನ್ನು ಪ್ರತಿ ರವಿವಾರ ಕೈಗೊಳ್ಳುತ್ತೇವೆ. ಆಸಕ್ತರು ಭಾಗವಹಿ ಸಬಹುದು. ಮುಂದಿನ ರವಿವಾರ ಬಸವೇಶ್ವರ ವೃತ್ತ, ಪೂಜಾವನ ಸ್ವತ್ಛಗೊ ಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮಂಡಳಿಯಲ್ಲಿಯ ಕಾರ್ಮಿಕರಿಗೆ, ಸಿಬ್ಬಂದಿಗೆ ಕಾಯಕದ ಅರಿವು ಮೂಡಿಸಿ, ಸುಕ್ಷೇತ್ರವನ್ನು ಕಸಮುಕ್ತ, ಸ್ವತ್ಛತೆಯ ತಾಣವಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಈ ಅಭಿಯಾನ
ಕೈಗೊಂಡಿರುವುದಾಗಿ ಮಹಾಂತೇಶ ಕುರಿ, ತೀರ್ಥಲಿಂಗ ಬೆಳಗಲ್ಲ, ಬಸವರಾಜ ಗೌಡರ ಹೇಳಿದರು.

ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಎಂ.ಗಂಗಪ್ಪ ಬೆಳಗ್ಗೆ 6 ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸಿ
ಸಂಗಮನಾಥನ ದೇವಾಲಯ ಆವರಣ, ರಸ್ತೆಗಳು, ಬಸವೇಶ್ವರ ವೃತ್ತ ವಿಕ್ಷಿಸಿ ಸಭಾ ಭವನಕ್ಕೆ ಬಂದಾಗ ಅಭಿಯಾನದ
ಯುವಕರು ಸುಕ್ಷೇತ್ರದಲ್ಲಿಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಆಯುಕ್ತರು ಮಂಡಳಿಯ ಸಿಬ್ಬಂದಿಗೆ ಎಲ್ಲ ಸಮಸ್ಯೆ ಪರಿಹಾರವಾಗಬೇಕು ಎಂದರು.

ಇದನ್ನೂ ಓದಿ:ಲಡಾಖ್ ಗಡಿಯಲ್ಲಿ ಚೀನಿ ಸೈನಿಕನನ್ನು ಬಂಧಿಸಿದ ಭಾರತೀಯ ಸೇನೆ

ಯುವಕರೊಂದಿಗೆ ಆಯುಕ್ತರು ಸಭಾ ಭವನ, ಪೂಜಾವನ, ಗೋಶಾಲೆ ವೀಕ್ಷಿಸಿದರು. ವಾರದಲ್ಲಿ ಪೂಜಾವನ ಸ್ವತ್ಛಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಂಡಳಿ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ, ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೊರಗುತ್ತಿಗೆ ಪಡೆದ ಖಾಸಗಿ ಕಂಪನಿಯವರು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ವ್ಯವಸ್ಥೆ ಹಾಳಾಗಿದೆ. ಹೊರಗುತ್ತಿಗೆ ಪಡೆದ ಖಾಸಗಿ ಕಂಪನಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ದರ್ಶನಕ್ಕೆ ಬಂದ ಭಕ್ತರಿಗೆ ಸೌಲಭ್ಯಗಳ ಕೊರತೆ ಆಗಬಾರದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next