Advertisement

ಮೀನು ಸಾಯುವ, ವಲಸೆ ಹಕ್ಕಿ ಬರುವುದನ್ನು ನಿಲ್ಲಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಬಿಜ್ಜೂರ್

03:51 PM Jun 27, 2022 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಪರಿಸರದ ಅಂದವನ್ನು ಹದಗೆಡಿಸುತ್ತಿದೆ. ಸುಂದವಾದ ಕೆರೆಗಳು ಮಲಿನಗೊಳ್ಳುತ್ತಿವೆ. ಈ ನಡುವೆ ಖ್ಯಾತ ಅಂಕಣಕಾರ ಹಾಗು ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಹರೀಶ್ ಬಿಜ್ಜೂರ್ ಅವರು ಕಾಡುಗೊಂಡನಹಳ್ಳಿ ಕೆರೆ ಮಲಿನಗೊಳ್ಳುತ್ತಿರುವ ಕುರಿತು ಕೂ ಮಾಡಿದ್ದಾರೆ.

Advertisement

ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು ಕೆರೆಯನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಕೂ ಮಾಡಿರುವ ಹರೀಶ್ ಬಿಜ್ಜೂರ್, ಒಳಚರಂಡಿಯಲ್ಲಿ ಕಸ ತುಂಬಿಕೊಂಡು ನೀರು ಗಬ್ಬೆದ್ದು ನಾರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ‘ಈ ಕೊಳಕು ಚರಂಡಿ ನೀರು ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಹರಿಯುತ್ತದೆ! ಮೀನು ಸಾಯುವ ಮತ್ತು ವಲಸೆ ಹಕ್ಕಿಗಳು ಬರುವುದನ್ನು ನಿಲ್ಲಿಸುವ ಮೊದಲು ಇದರ ಸ್ವಚ್ಛತೆ ಕಾಪಾಡಿ’ ಎಂದು ಹೇಳಿದ್ದಾರೆ.

Koo App

iKOO: यह गंदा नाली का पानी डिजाइन द्वारा अभी भी सुंदर #KadugondanahalliLake में बहता है! तो कब तक मछलियां मर जाएंगी और प्रवासी पक्षी आना बंद कर देंगे? #BBMP @BBMPCOMM @BBMPAdmn @CMofKarnataka #Pollution #Lakes #WaterPollution

Advertisement

Harish Bijoor (@harishbijoor) 27 June 2022

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next