Advertisement

ಅ.22 ರಂದು ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜನೆ: ಸಚಿವ ಕೆ.ಎಸ್.ಈಶ್ವರಪ್ಪ

11:59 AM Oct 19, 2022 | Team Udayavani |

ಶಿವಮೊಗ್ಗ: ಶಿವಮೊಗ್ಗದಲ್ಲಿ ಇದೇ ಅ.22 ರ ಸಂಜೆ 5 ಕ್ಕೆ ಸೈನ್ಸ್ ಮೈದಾನದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಸಾಮಗಾನ ಹಾಗೂ ಶ್ರೀಗಂಧ ಸಂಸ್ಥೆಯಿಂದ 1944 ರಲ್ಲಿ ವೀರ್ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದಲ್ಲಿ ಹಲವರು ಸಾವರ್ಕರ್ ಬಗ್ಗೆ ತಿಳಿದು ಪೂಜ್ಯ ಭಾವನೆಯಿಂದ ಮಾತಾಡ್ತಾರೆ. ಆದರೆ ಇನ್ನೂ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು.

ಸಾವರ್ಕರ್ ಬಗ್ಗೆ ಸರಿಯಾದ ವಿಚಾರ ತಿಳಿಯದೇ ಸಮಾಜಕ್ಕೆ ದ್ರೋಹ ಮಾಡುವ ರೀತಿ ಮಾತನಾಡ್ತಾರೆ. ಸಮಾಜಕ್ಕೆ ದ್ರೋಹ ಮಾಡುವವರಿಗೆ ಕೆಲ ರಾಜಕಾರಣಿಗಳು ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಸಾವರ್ಕರ್ ಅಂದು- ಇಂದು, ಎಂದಿಗೂ ಪ್ರೇರಣೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಮೊಮ್ಮಗ, ರಾಷ್ಟ್ರವಾದಿ ಚಿಂತಕ ಸಾತ್ಯಕಿ ಸಾವರ್ಕರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next