Advertisement

‘ವಿವೇಕಾನಂದರ ಚಿಂತನೆ, ದೂರದೃಷ್ಟಿತ್ವ ಅಗತ್ಯ’

06:23 AM Jan 14, 2019 | Team Udayavani |

ಸವಣೂರು : ವಿವೇಕಾನಂದರ ಜೀವನದ ಆದರ್ಶ ಹಾಗೂ ವಿವೇಕ ವಾಣಿ ಯನ್ನು ಅಳವಡಿಸಿಕೊಂಡು ಮುನ್ನಡೆದಾಗ ಯಶಸ್ವಿಯಾಗಲು ಸಾಧ್ಯ. ವಿವೇಕಾನಂದರ ಚಿಂತನೆ ಹಾಗೂ ದೂರದೃಷ್ಟಿತ್ವ ಇಂದಿನ ಅಗತ್ಯ ಎಂದು ಪುತ್ತೂರು ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಹರಿಣಿ ಪುತ್ತೂರಾಯ ಹೇಳಿದರು.

Advertisement

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಶನಿವಾರ ರಾತ್ರಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಸಮ್ಮೇಳನ, ದ.ಕ. ಜಿಲ್ಲಾ ಮತ್ತು ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ ರಾಜ್ಯ ಯುವ ಮತ್ತು ಸಾಂಘಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಯುವ ಜನತೆ ಸಮಾಜದ ಭವಿಷ್ಯದ ರೂವಾರಿಗಳು ಎಂದರು.

ಆರೋಗ್ಯ ಕಾರ್ಯಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ, ಸ್ವಾಮಿ ವಿವೇಕಾನಂದರ ಕುರಿತು ಆದರ್ಶ ಗೋಖಲೆ, ಯುವಜನರು ಮತ್ತು ಸಮಾಜ ಸೇವಾ ಕಾರ್ಯ ಕುರಿತು ಬಿ.ವಿ. ಸೂರ್ಯನಾರಾಯಣ, ಸೀತಾರಾಮ ಕೇವಳ, ಹನುಮಂತ ಗೌಡ ಡಿ.ಎಂ. ವಿಚಾರಗೋಷ್ಠಿ ನಡೆಸಿದರು.

ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಪ್ರಶಸ್ತಿ ಪ್ರದಾನ ಮಾಡಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್‌ ರೈ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಂ| ವಿಜಯ ಹಾರ್ವಿನ್‌, ಬೆಳಂದೂರು ಪದವಿ ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಕೆ., ಸವಣೂರು ಪ್ರಾ.ಕೃ.ಸ. ಸಂಘದ ಸಿಇಒ ಚಂದ್ರಶೇಖರ ಪಿ., ಸವಣೂರು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್‌ ಕುಮಾರ್‌ ಜೈನ್‌, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ| ಎಸ್‌. ಬಾಲಾಜಿ, ದ.ಕ. ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ರಾಜೀವ್‌ ಸಾಲಿಯಾನ್‌, ಪುತ್ತೂರಿನ ಸುಬ್ರಹ್ಮಣ್ಯ ಕರುಂಬಾರು, ಸುಳ್ಯದ ದಿಲೀಪ್‌ ಬಾಬ್ಲುಬೆಟ್ಟು, ಬೆಳ್ತಂಗಡಿ ಯ ಪ್ರಭಾಕರ ಶೆಟ್ಟಿ, ಬೆಳಗಾವಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ, ರಾಜ್ಯ ಒಕ್ಕೂಟದ ಮಾಜಿ ಅಧ್ಯಕ್ಷ ಚಿತ್ತಪ್ಪ, ಸವಣೂರು ಯುವಕ ಮಂಡಲದ ಅಧ್ಯಕ್ಷ ಮನೋಹರ ಮೆದು, ಪದ್ಮಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ. ಶೆಟ್ಟಿ, ಪುತ್ತೂರು ತಾ| ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್‌, ಸುಳ್ಯದ ದೇವರಾಜ್‌ ಮುತ್ಲಾಜೆ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮೀ ಎಸ್‌. ರೈ ಉಪಸ್ಥಿತರಿದ್ದರು. ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್‌ ರೈ ಸೂಡಿಮುಳ್ಳು ಸ್ವಾಗತಿಸಿ, ವಂದಿಸಿದರು. ತಾರಾನಾಥ ಸವಣೂರು, ಗುರುಪ್ರಿಯಾ ನಾಯಕ್‌ ನಿರೂಪಿಸಿದರು.

Advertisement

ರಾಜ್ಯ ಯುವ, ಸಾಂಘಿಕ ಪ್ರಶಸ್ತಿ ಪುರಸ್ಕೃರು
ಉಡುಪಿ ಜಿಲ್ಲೆಯ ಶರಣ್‌ ಕುಮಾರ್‌ ಮಟ್ಟು, ದಕ್ಷಿಣ ಕನ್ನಡದಿಂದ ಕಬಕ ಮಹಾದೇವಿ ಯುವಕ ಮಂಡಲದ ಸುರೇಶ್‌ ಪಿ., ಬೆಂಗಳೂರು ಗ್ರಾ. ಜಿಲ್ಲೆ ಸಂತೋಷ್‌ ಜಿ.ಟಿ., ಬೆಂಗಳೂರು ನಗರ ಜಿಲ್ಲೆ ನಂಜಪ್ಪ ಡಿ.ಎಸ್‌., ರಾಮನಗರ ಚಂದ್ರ ಎಂ., ತುಮಕೂರು ರವಿ ಜೆಪಿ, ಹಾಸನ ಉಲ್ಲಾಸ್‌ ಎಚ್.ವಿ., ಮಂಡ್ಯ ಎಂ.ಸಿ. ಸೌಂದರ್ಯ, ಕೋಲಾರ ಅರುಣ್‌ ಕುಮಾರ್‌, ಚಿತ್ರದುರ್ಗ ದೇವರಾಜ್‌, ದಾವಣಗೆರೆ ಪೃಥ್ವಿ ಬಿ.ಎಂ., ಮೈಸೂರು ಗೋವಿಂದ ನಾಯ್ಕ, ಕಲಬುರಗಿ ಚನ್ನವೀರ ವಿ. ಕಣಗಿ, ಬೀದರ್‌ ನಾಗರಾಜ್‌, ರಾಯಚೂರು ಬಾಬಾ, ಹಾವೇರಿ ಹರೀಶ್‌ ಗುಂಗೇರ್‌, ಚಿಕ್ಕಬಳ್ಳಾಪುರ ಟಿ. ಶ್ರೀ ಲಕ್ಷ್ಮೀ, ಧಾರವಾಡ ಮಂಜುಳಾ ಎಂ. ಮುನವಳ್ಳಿ, ಉತ್ತರ ಕನ್ನಡ ದಯಾನಂದ ಹೊನ್ನಾವರ, ಬಳ್ಳಾರಿ ಚಂದ್ರಶೇಖರ ರೆಡ್ಡಿ, ಕೊಪ್ಪಳ ಜಯಪ್ಪ,ಶಿವಮೊಗ್ಗ ಲೋಕೇಶಪ್ಪ, ವಿಜಯಪುರ ಹುಸೇನ ಬಾದಶಾಹ್‌ ಮುಲ್ಲಾ, ಚಿಕ್ಕಮಗಳೂರು ಅಜ್ಜಂಪುರ ಎಸ್‌. ಶೃತಿ, ಚಾಮರಾಜನಗರ ಅಂಕರಾಜು, ಬೆಳಗಾವಿ ಸುಧೀರ್‌ ರಾಜು ನಾಯರ್‌, ಯಾದಗಿರಿ ಜಟ್ಟಪ್ಪ ಪೂಜಾರಿ,ಬಾಗಲಕೋಟೆ ಬಾಳಪ್ಪ ಮಾಯಪ್ಪ ಗಡ್ಡದವರ್‌, ಗದಗ ಚನ್ನಾರೆಡ್ಡಿ ಬಸವರಾಜ ಗೂಳ ರೆಡ್ಡಿ, ಕೊಡಗು ನವೀನ್‌ ದೇರಳ ಅವರಿಗೆ ರಾಜ್ಯ ಯುವ ಪ್ರಶಸ್ತಿ, ರಾಜ್ಯ ಉತ್ತಮ ಯುವ ಒಕ್ಕೂಟ ಪ್ರಶಸ್ತಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿ, ಉತ್ತಮ ಸಾಂಘಿಕ ಪ್ರಶಸ್ತಿಗೆ ಬೆಳ್ತಂಗಡಿ ಮುಂಡಾಜೆಯ ಯಂಗ್‌ ಚಾಲೆಂಜರ್ಸ್‌, ಚಿಕ್ಕಮಗಳೂರು ತರಿಕೆರೆ ಸ್ಪೂರ್ತಿ ಯುವ ಕಲಾ ಸಂಘಕ್ಕೆ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next