Advertisement

ಸವದತ್ತಿ: ಸ್ವಾದಿಮಠದ ಶಿವಬಸವ ಶ್ರೀಗಳು ವಿಧಿವಶ

08:57 PM Nov 06, 2022 | Team Udayavani |

ಸವದತ್ತಿ: ಇಲ್ಲಿನ ಸ್ವಾದಿಮಠದ ಶಿವಬಸವ ಶ್ರೀಗಳು ರವಿವಾರ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ರವಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

Advertisement

ಶ್ರೀಗಳ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಸವದತ್ತಿ ಪಟ್ಟಣಕ್ಕೆ ತರಲಾಗಿದೆ. ಮಠದಲ್ಲಿ ಮೃತರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಠದ ಭಕ್ತರು, ಶ್ರೀಗಳ ಆಪ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ರಾಣೆ ಬೆನ್ನೂರಿನ ಶ್ರೀಗಳು, ಹಾವೇರಿಯ ಸಿಂದಗಿ ಮಠದ ಶ್ರೀಗಳು, ಇನಾಮಹೊಂಗಲದ ಶ್ರೀಗಳು, ಹಿಡಕಲ್‍ನ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಶ್ರೀಮಠದ ಸಂಪ್ರದಾಯದಂತೆ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಮುಂಜಾನೆಯಿಂದ ಸಂಜೆವರೆಗೂ ಭಕ್ತರಿಗೆ ಅಂತಿಮ ದರ್ಶನ ಕಲ್ಪಿಸಲಾಗಿತ್ತು. ಸಂಜೆ ವೇಳೆ ಸ್ವಾಧಿಮಠದಿಂದ ಆರಂಭವಾದ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಎಸ್‍ಎಲ್‍ಎಓ ಕ್ರಾಸ್, ಗಾಂಧೀ ಚೌಕ, ಆನಿ ಅಗಸಿ, ಕಟಕೋಳ ಬ್ಯಾಂಕ್ ವೃತ್ತ, ಎಪಿಎಮ್ಸಿ ತಲುಪಿತು.

ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಕೊನೆಗೆ ವಿಜಯಪುರ ಜಿಲ್ಲೆಯ ಕುದರಿ ಸಾಲವಾಡಗಿ ಗ್ರಾಮಕ್ಕೆ ಬಿಳ್ಕೊಡಲಾಯಿತು. ಅಂತಿಮ ಯಾತ್ರೆಗೆ ಹೊರಟ ಶ್ರೀಗಳ ಯಾತ್ರೆಗೆ ದಾರಿಯುದ್ದಕ್ಕೂ ನೀರು ಹರಿಸಿ ನಿರ್ಮಲಗೊಳಿಲಾಯಿತು. ಸೋಮವಾರ ಮುಂಜಾನೆ 11 ಗಂಟೆಗೆ ಶ್ರೀಗಳ ಸ್ವಗ್ರಾಮ ಕುದರಿ ಸಾಲವಾಡಗಿ ಗ್ರಾಮದ ಮಹಾದೇವ ತಾತಯ್ಯನವರ ಮಠದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ಐದು ಮಠಗಳಲ್ಲಿ ಒಂದಾದ ಸ್ವಾದಿಮಠವು ಮೂಲತಃ ಸ್ವಾದಿ ಅವರ ಮನೆತನಕ್ಕೆ ಸೇರಿದೆ. ಇದೇ ಮನೆತನದವರೇ ಮಠಾಧೀಶರಾಗುವ ಪರಂಪರೆಯು ರೂಢಿಯಲ್ಲಿತ್ತು. ಮಹಾಂತಯ್ಯ ಸ್ವಾಮಿಗಳ ನಂತರ ಅವರ ಪುತ್ರ ಚನ್ನವೀರಯ್ಯನನ್ನು ಮಠದ ಸ್ವಾಮಿಗಳು ಎಂದು ನೇಮಸಲು ತಿರ್ಮಾನಿಸಲಾಗಿತ್ತು. ಆದರೆ ಅವರು ಸಂಸಾರಿಗಳಾಗಿದ್ದರಿಂದ ಇದೇ ಮನೆತನದ ಮುರಿಗೆಪ್ಪ ಮಠವನ್ನು ಮುಂದುವರೆದರು. ಸ್ವಾದಿ ಮುಂದೆ ಹೂಲಿಕಟ್ಟಿ ಮನೆತನ ಎಂದು ಬದಲಾಯಿತು. ಮಠದ ಪೂಜಾಧಿಕೈಂಕರ್ಯಗಳನ್ನು ಇದೇ ಮನೆತನದವರು ನಿರ್ವಹಿಸುತ್ತಾರೆ.

Advertisement

ಶಿವಬಸವ ಶ್ರೀಗಳು ಮಠ ಮೊದಲನೆಯ ಪೀಠಾಧಿಕಾರಿಗಳೆಂದು ನೇಮಿಸಲಾಯಿತು. ಮೂಲತಃ ವಿಜಯಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದವರು. 1957 ರಲ್ಲಿ ವೀರಯ್ಯ ವಿರಕ್ತಮಠ ಮತ್ತು ಗುರುಬಸವ್ವ ದಂಪತಿಗಳ ಮಗನಾಗಿ ಜನಿಸಿದರು. ಕುದರಿಸಾಲವಾಡಗಿ ಮತ್ತು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಪಡೆದುಕೊಂಡ ಇವರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಸಂಸ್ಕøತ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದರು. 1986-87 ರಲ್ಲಿ ಸವದತ್ತಿಯ ಸ್ವಾದಿಮಠದ ಪ್ರಥಮ ಪೂಜ್ಯರಾಗಿ ಬಂದ ಅವರು, ಇಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು.

ಅನುಭಾವ ಪಥ ಎಂಬ ಶರಣರ ಜೀವನ ದರ್ಶನ ಸಾರುವ ಪತ್ರಿಕೆ ನಡೆಸಿದರು. ಅಲ್ಲದೇ ಕುದರಿ ಸಾಲವಾಡಗಿಯ ಮಹಾದೇವಪ್ಪನ ಮಠದ ಮಠಾಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುದರಿ ಸಾಲವಾಡಗಿಯಲ್ಲಿರುವ ಮಠ ಬೆಳೆಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಸ್ವಾದಿಮಠದ ಅಧಿಕಾರ ವಹಿಸಿಕೊಂಡ ಬಳಿಕ ಮಠದ ಕಟ್ಟಡ ಹೊಸದಾಗಿಸಿದರು. ಪೂಜ್ಯರು ಸದಾ ಶಿವಚಿಂತನೆಯಲ್ಲಿಯೇ ಹೆಚ್ಚು ಇರ ಬಯಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next