Advertisement

ಪಾಕಿಸ್ಥಾನಕ್ಕೆ ಇಲ್ಲ ಎನ್ನಲಾಗದು: ಸೌದಿ

12:30 AM Feb 19, 2019 | Team Udayavani |

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ನಡುವೆ ಪುಲ್ವಾಮಾ ಘಟನೆ ಸಂಬಂಧವಾಗಿ ಉದ್ವಿಗ್ನತೆ ಉಂಟಾಗಿರುವಾಗಲೇ ಸೌದಿ ಅರೇಬಿಯಾದ ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ 1.2 ಲಕ್ಷ ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕಿದ್ದಾರೆ. 

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಪಾಕಿಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಇಲ್ಲ ಎನ್ನಲಾಗದು’ ಎಂದಿದ್ದಾರೆ. ಅದಕ್ಕೆ ಪೂರಕವಾಗಿ ಸಲ್ಮಾನ್‌ರಿಗೆ ಪಾಕ್‌ನ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿ “ನಿಶಾನ್‌-ಎ-ಪಾಕಿಸ್ತಾನ್‌’ ಅನ್ನು ಪ್ರದಾನ ಮಾಡಲಾಗಿದೆ. ಇದೇ ವೇಳೆ, ಸಲ್ಮಾನ್‌ ಅವರು ಭಾರತ-ಪಾಕ್‌ ನಡುವಿನ ವೈಮನಸ್ಸನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಒಪ್ಪಂದಕ್ಕೆ ಪೂರಕವಾಗಿ ಸೋಮವಾರ ಸೌದಿ ಅರೇಬಿಯಾ ಮತ್ತು ಪಾಕಿಸ್ಥಾನ ಜಂಟಿ ಉದ್ಯಮ ಸಮಾವೇಶ ನಡೆಸಿದವು. ಸೌದಿ ದೊರೆಯ ಭೇಟಿ ಆರ್ಥಿಕವಾಗಿ ಜರ್ಝರಿತವಾಗಿರುವ ಪಾಕಿಸ್ಥಾನಕ್ಕೆ ಕೊಂಚ ನೆಮ್ಮದಿ ತರಲಿದೆ ಎಂದು ವಿಶ್ಲೇಷಿಸಲಾಗಿದೆ.  ಮಂಗಳವಾರ ಸೌದಿ ದೊರೆ ಹೊಸದಿಲ್ಲಿಗೆ ಆಗಮಿಸಲಿದ್ದು, ಅವರೊಂದಿಗೆ ಭಯೋತ್ಪಾದನೆ ಕುರಿತೂ ಭಾರತ ಚರ್ಚಿಸಲಿದೆ ಎನ್ನಲಾಗಿದೆ. ತದನಂತರ ಅವರು ಚೀನಾಕ್ಕೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next