Advertisement

ಅಯೋಗ್ಯನಿಗಾಗಿ ಸತೀಶ್‌ ವರ್ಕೌಟ್‌

11:24 AM Feb 10, 2018 | |

ಸತೀಶ್‌ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಸತೀಶ್‌ಗೆ ಎದುರಾಳಿಯಾಗಿ ರವಿಶಂಕರ್‌ ಕಾಣಿಸಿಕೊಳ್ಳುತ್ತಿದ್ದಾರೆ. ರವಿಶಂಕರ್‌ರಂತಹ ದೈತ್ಯ ನಟನ ಎದುರು ನಟಿಸಬೇಕಾದರೆ, ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ, ಸತೀಶ್‌ ನೀನಾಸಂ ಕಳೆದ ಎರಡು ತಿಂಗಳಿನಿಂದ ವರ್ಕೌಟ್‌ ನಡೆಸುತ್ತಿದ್ದಾರೆ. 

Advertisement

ಇಷ್ಟಕ್ಕೂ ವರ್ಕೌಟ್‌ ಯಾಕೆ ಎಂದರೆ, “ರವಿಶಂಕರ್‌ ಅವರು ಇಲ್ಲಿ ನನ್ನ ಎದುರಾಳಿಯ ಪಾತ್ರ ಮಾಡುತ್ತಿದ್ದಾರೆ. ಅವರ ಎತ್ತರಕ್ಕೆ ನಾವಿಲ್ಲ. ಹೈಟ್‌ ಇಲ್ಲದಿದ್ದರೂ, ಫಿಟ್‌ ಆಗಿರಬೇಕು. ಅವರೆದುರು ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್‌ ಆಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಕಳೆದ ಎರಡು ತಿಂಗಳುಗಳಿಂದ ವರ್ಕೌಟ್‌ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸತೀಶ್‌.

ಈ ಚಿತ್ರದಲ್ಲಿ ಅವರು ಗ್ರಾಮ ಪಂಚಾಯ್ತಿ ಸದಸ್ಯನಾಗಿ ಕಾಣಿಸಿಕೊಳ್ಳುತ್ತಿದ್ದು, ಮಹೇಶ್‌ ಕುಮಾರ್‌ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರವನ್ನು ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ರಾಜರಾಜೇಶ್ವರಿ ನಗರದ ಗೋಲ್ಡ್‌ ಜಿಮ್‌ನಲ್ಲಿ ಸತೀಶ್‌ ವರ್ಕೌಟ್‌ ಮಾಡುತ್ತಿರುವಾಗ ಕಾಣಿಸಿಕೊಂಡಿದ್ದು ಹೀಗೆ…

Advertisement

Udayavani is now on Telegram. Click here to join our channel and stay updated with the latest news.

Next