Advertisement

ಸತೀಶ ಈಗ “ಬ್ರಹ್ಮಾಚಾರಿ’

09:40 AM Apr 05, 2019 | Lakshmi GovindaRaju |

ಕೆಲ ತಿಂಗಳ ಹಿಂದಷ್ಟೇ ನೀನಾಸಂ ಸತೀಶ್‌ ಅಭಿನಯದ ‘ಚಂಬಲ್‌’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಭಾರೀ ಸದ್ದು ಮಾಡಿಕೊಂಡು ತೆರೆಗೆ ಬಂದಿದ್ದ “ಚಂಬಲ್‌’ ಚಿತ್ರಕ್ಕೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಚಿತ್ರ ಮಾತ್ರ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ.

Advertisement

“ಚಂಬಲ್‌’ ಚಿತ್ರದ ಬಳಿಕ ನಟ ಸತೀಶ್‌ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ, ಸತೀಶ್‌ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ ಎಂಬ ಉತ್ತರ ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ಚಿತ್ರದ ಟೈಟಲ್‌ ಕೂಡಾ ಲಾಂಚ್‌ ಆಯಿತು. ಆ ನಂತರ ಸತೀಶ್‌ ನಿರ್ದೇಶನದ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲಿಲ್ಲ.

ಇವೆಲ್ಲದರ ನಡುವೆ ಈಗ ಸತೀಶ್‌ “ಬ್ರಹ್ಮಾಚಾರಿ’ಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಸತೀಶ್‌ ಅಭಿನಯದ ಮುಂಬರುವ ಚಿತ್ರಕ್ಕೆ “ಬ್ರಹ್ಮಾಚಾರಿ’ ಎಂದು ಟೈಟಲ್‌ ಇಡಲಾಗಿದೆ. ಉದಯ್‌ ಮೆಹ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಲವ್‌ ಇನ್‌ ಮಂಡ್ಯ’ ಚಿತ್ರದಲ್ಲಿ ಒಂದಾಗಿದ್ದ ಸತೀಶ್‌ ಮತ್ತು ನಿರ್ಮಾಪಕ ಉದಯ್‌ ಮೆಹ್ತಾ ಜೋಡಿ ಈ ಚಿತ್ರದಲ್ಲಿ ಮತ್ತೆ ಒಂದಾಗಲಿದೆ.

ಇನ್ನು ಇಲ್ಲಿಯವರೆಗೆ ಕಾಣಿಸಿಕೊಂಡಿರದ ಪಾತ್ರದಲ್ಲಿ ಸತೀಶ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, “ಬ್ರಹ್ಮಾಚಾರಿ’ ಚಿತ್ರದ ಟೈಟಲ್‌ಗೆ “100 ಪರ್ಸೆಂಟ್‌ ವರ್ಜಿನ್‌’ ಎನ್ನುವ ಸಬ್‌ ಟೈಟಲ್‌ ಅನ್ನೂ ಇಟ್ಟಿದೆ. ಇನ್ನು ಹೆಸರೇ ಹೇಳುವಂತೆ, “ಬ್ರಹ್ಮಾಚಾರಿ’ ಪಕ್ಕಾ ಕಾಮಿಡಿ ಸಿನಿಮಾ.

ಈ ಹಿಂದೆ “ಬಾಂಬೆ ಮಿಠಾಯಿ’ ಮತ್ತು “ಡಬಲ್‌ ಇಂಜಿನ್‌’ ಕಾಮಿಡಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ಇದೇ ಯುಗಾದಿ ಹಬ್ಬಕ್ಕೆ “ಬ್ರಹ್ಮಾಚಾರಿ’ ಚಿತ್ರ ಪ್ರಾರಂಭವಾಗಲಿದ್ದು, “ಬ್ರಹ್ಮಾಚಾರಿ’ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next