Advertisement

ಬಿಜೆಪಿ ಸರ್ಕಾರದಿಂದ ವಿಷಬೀಜ ಬಿತ್ತುವ ಕೆಲಸ: ಸತೀಶ್ ಜಾರಕಿಹೊಳಿ

04:45 PM Apr 24, 2022 | Team Udayavani |

ಬೆಳಗಾವಿ: ಬಿಜೆಪಿ ಸರ್ಕಾರಕ್ಕೆ ಯಾವುದೇ ಜನಹಿತ ಹಾಗೂ ಜನಪರ ಕಾರ್ಯಗಳ ಕಡೆಗೆ ಗಮನ ಇಲ್ಲ. ಕೇವಲ ಜಾತಿಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.

Advertisement

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಕೇವಲ ಚುನಾವಣೆ ಗೆದ್ದು, ರಾಜ್ಯವನ್ನು ಲೂಟಿ ಹೊಡೆಯುವುದೇ ಕೆಲಸವಾಗಿದೆ. ಈಗಿರುವ ಅವರ ಪರ್ಸೆಂಟೇಜ್ ಪ್ರಮಾಣದಲ್ಲಿ ಮುಂದೆ ಶೇಕಡಾ 50 ರಷ್ಟು ಜಾಸ್ತಿಯಾಗಬಹುದು ಎಂದು ಲೇವಡಿ ಮಾಡಿದರು.

ಜನಸಾಮಾನ್ಯರಿಂದ ಹಿಡಿದು ವಿವಿಧೆಡೆ ಪರ್ಸಂಟೇಜ್ ಆರೋಪಗಳು ಸರ್ಕಾರ ಮೇಲೆ ಬರುತ್ತಿವೆ. ಕೇವಲ ವಿರೋಧ ಪಕ್ಷವಾಗಿ ಹೇಳುತ್ತಿಲ್ಲ. ಪರ್ಸೆಂಟೇಜ್ ಕಾಟಕ್ಕೆ ಜನಸಾಮಾನ್ಯರು ರೋಸಿ ಹೋಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ:ಸಾಲ ವಾಪಸ್‌ ಕೇಳಲು ಹೋದವನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಮಹಿಳೆಯರು!

ಪಿಎಸ್‍ಐ ನೇಮಕಾತಿಯಲ್ಲಿ ನಡೆದ ಹಗರಣದ ತನಿಖೆ ಪಾರದರ್ಶಕವಾಗಿ ಆಗಬೇಕು. ಯಾರೇ ಇರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಬೇಕು ಎಂದು ಸತೀಶ ಜಾರಕಿಹೊಳಿ ಒತ್ತಾಯಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಆರು ತಿಂಗಳ ಮೊದಲೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next