Advertisement
ಕೇವಲ ಮಾಬುಕಳದಿಂದ ಕರಿಕಲ್ಲುಕಟ್ಟೆ ತನಕ ಮಾತ್ರ ವಿನಾಯಿತಿ ನೀಡಲಾಗು ವುದು, ಉಪ್ಲಾಡಿ ಸೇತುವೆಯ ಅನಂತರದ ವಡ್ಡರ್ಸೆ ಗ್ರಾ.ಪಂ. ಭಾಗದ ವರು ಶುಲ್ಕ ನೀಡಬೇಕು ಎಂದು ಟೋಲ್ ಸಿಬಂದಿ ಹೇಳುತ್ತಿದ್ದಾರೆ. ವಾಹನ ಸವಾರರು ಈ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ನವಯುಗದವರು ಕಳೆದ ಬಾರಿ ರಾಜ್ಯ ಚುನಾವಣೆಯ ಸಂದರ್ಭ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸ್ಥಳೀಯರಿಂದ ಶುಲ್ಕ ವಸೂಲಿಗೆ ಮುಂದಾಗಿದ್ದರು ಮತ್ತು ವಿರೋಧ ವ್ಯಕ್ತವಾದಾಗ ಕೈಬಿಟ್ಟಿದ್ದರು. ಪ್ರಸ್ತುತ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಮತ್ತೆ ಟೋಲ್ ವಸೂಲಿಗೆ ಪ್ರಯತ್ನಿಸಲಾಗುತ್ತಿದೆ. ಚುನಾವಣೆಯ ಸಂದರ್ಭ ಸ್ಥಳೀಯರಿಗೆ ಹೋರಾಟ ಮಾಡಲು ಅವಕಾಶವಿಲ್ಲ, ಜನಪ್ರತಿನಿಧಿಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.