Advertisement

ಊಹೆಯಿಂದ ಸಿಎಂ ಬದಲಾವಣೆ ಅಸಾಧ್ಯ : ಸಚಿವೆ ಶಶಿಕಲಾ ಜೊಲ್ಲೆ

02:02 PM Jun 09, 2021 | Team Udayavani |

ವಿಜಯಪುರ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ, ಇದೆಲ್ಲ ಊಹಾಪೋಹ. ಮುಂದಿನ ಚುನಾವಣೆಯನ್ನು ಕೂಡ ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸಲಿದ್ದೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಬುಧವಾರ ನಗರದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬರಗಾಲ, ಪ್ರವಾಹ, ಕೋವಿಡ್ ಹೀಗೆ ರಾಜ್ಯದಲ್ಲಿ ಏನೆಲ್ಲ ಸಂಕಷ್ಟ ಎದುರಾದರೂ ಅತ್ಯಂತ ಕ್ರೀಯಾಶಿಲತೆಯಿಂದ ನಿಭಾಯಿಸಿದ್ದಾರೆ. ಹೀಗಾಗಿ ಸಮರ್ಥ ನಾಯಕನನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಗಾಳಿಮಾತಿಗೆ ಕಿವಿಗೊಡುವ ಅಗತ್ಯವಿಲ್ಲ, ಸಮರ್ಪಕವಾಗಿ ಆಡಳಿತ ನಡೆಸಿದ್ದರಿಂದ ಯಡಿಯೂರಪ್ಪ ಬದಲಾವಣೆ ಅಸಾಧ್ಯ ಎಂದರು.

ಅನೇಕ ಜನ ವದಂತಿಗಳನ್ನು ಮಾಡುತ್ತಾರೆ, ಹಾಗಂತ ಅದೆಲ್ಲ ನಿಜವಲ್ಲ. ಇಂಥ ವದಂತಿ ಸೃಷ್ಟಿಸುವವರು ಯಾರು ಎಂದು ನಾನು ಉಲ್ಲೇಖ ಮಾಡೋದಿಲ್ಲ ಎಂದರು.

ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳ: ಜಾಗಟೆ ತಟ್ಟೆ ಬಾರಿಸಿ ವಿನೂತನ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್

Advertisement

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಸಚಿವರೂ ತಮ್ಮ ತಮ್ಮ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೂ ಪಕ್ಷದ ಶಾಸಕರಲ್ಲೇ ಒಂದಿಬ್ಬರು ಸಿಎಂ ಬಗ್ಗೆ  ತಮಗೆ ಅನಿಸಿದ್ದನ್ನು ಹೇಳುತ್ತಲೇ ಇರುತ್ತಾರೆ. ಹೈಕಮಾಂಡ್ ಎಲ್ಲವನ್ನೂ ಅತ್ಯಂತ ಸೂಕ್ಷ್ಮತೆಯಿಂದ ಗಮನಿಸುತ್ತಿದ್ದು, ಸಪರ್ಕವಾದ ಉತ್ತರ ಕೊಡುತ್ತಾರೆ ಎಂದು ಮುಖ್ಯಮಂತ್ರಿ ವಿರೋಧಿ ಬಣಕ್ಕೆ ಚಾಟಿ ಬೀಸಿದರು.

ಕೋವಿಡ್ ಸಂದರ್ಭದಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಉಂಟು ಮಾಡುವ ಇಂತಹ ವಿಚಾರ ಪ್ರಸ್ತಾಪಿಸುವುದು ತಪ್ಪು ಪಕ್ಷ, ಸರ್ಕಾರ ಹಾಗೂ ರಾಜ್ಯದ ಜನರಿಗೂ ಇಂಥ ಹೇಳಿಕೆಗಳು ಬೇಸರ ತರಿಸುತ್ತವೆ ಎಂದರು.

ಯತ್ನಾಳ ಸಿಎಂ ವಿರುದ್ದ ಹೇಳಿಕೆ ನೀಡುತಗತ್ತಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಸವರ ಬಗ್ಗೆ ಮಾತನಾಡಲು ಚಿಕ್ಕವಳಾದ ನನ್ನಿಂದ ಸಾಧ್ಯವಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ನಮ್ಮ ಪಕ್ಷದಲ್ಲಿ ಹಲವಾರಿ ನಾಯಕರು, ಹಿರಿಯರಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next