Advertisement

ಸರಳೇಬೆಟ್ಟು ವಾರ್ಡ್‌ ಬೋರ್‌ವೆಲ್‌ ದುರಸ್ತಿ

11:40 PM May 13, 2019 | Sriram |

ಉಡುಪಿ: ನಗರದ ಸರಳೇಬೆಟ್ಟು ವಾರ್ಡ್‌ನ ಬೋರ್‌ವೆಲ್‌ಗ‌ಳಲ್ಲಿ ನೀರಿದ್ದರೂ ಜನರು ನೀರಿಗಾಗಿ ಊರೆಲ್ಲ ಸುತ್ತಾಡಬೇಕಾಗಿದೆ ಎನ್ನುವ ಕುರಿತು ಮೇ 12ರಂದು ಉದಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಬೋರ್‌ವೆಲ್‌ಗ‌ಳನ್ನು ದುರಸ್ತಿಗೊಳಿಸಿ ನೀರು ಸರಬರಾಜು ಮಾಡಲು ಸಿದ್ಧತೆ ನಡೆಸಿದೆ.

Advertisement

ಸರಳೇಬೆಟ್ಟು ವಾರ್ಡ್‌ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ನೆಹರೂ ನಗರ, ವಿಜಯನಗರ ಹಾಗೂ ಗಣೇಶ್‌ಬಾಗ್‌ ಮೊದಲಾದೆಡೆ ಉದಯವಾಣಿ ತಂಡ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಬಿಚ್ಚಿಟ್ಟಿದ್ದು, ಈ ಬಗ್ಗೆ ಸ್ಪಂದಿಸಿದ ಸ್ಥಳೀಯಾಡಳಿತ ಮೇ 13ರಂದು ನೆಹರೂನಗರದ ಹಾಗೂ ಸರಳೇಬೆಟ್ಟು ಜಂಕ್ಷನ್‌ನಲ್ಲಿ ಕಳೆದ 5 ವರ್ಷಗಳಿಂದ ನಿರುಪಯುಕ್ತವಾಗಿದ್ದ ಬೋರ್‌ವೆಲ್‌ಗೆ ಜೀವ ತುಂಬುವ ಕೆಲಸ ಮಾಡಿದೆ.

ಇದೀಗ ಬೋರ್‌ವೆಲ್‌ಗ‌ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ರಸ್ತೆಗಳನ್ನು ಅಗೆದು ಬೋರ್‌ವೆಲ್‌ಗ‌ೆ ಪೈಪ್‌ ಲೈನ್‌ ಜೋಡಣೆ ಕೆಲಸ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next