Advertisement

ನೆಹರು ಬಗ್ಗೆ ಸಂತೋಷ್‌ ಹೇಳಿಕೆ ಸರಿಯಲ್ಲ: ಉಗ್ರಪ್ಪ

11:26 PM Aug 26, 2019 | Lakshmi GovindaRaj |

ಬೆಂಗಳೂರು: ನೆಹರು ಅವರ ಬಗ್ಗೆ ಬಿಜೆಪಿಯ ಬಿ.ಎಲ್‌.ಸಂತೋಷ್‌ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ದೇಶಕ್ಕೆ ನೆಹರು ಅವರ ಕೊಡುಗೆ ಬಗ್ಗೆ ಸಂತೋಷ್‌ ಅವರಿಗೆ ಮಾಹಿತಿಯಿಲ್ಲ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜವಾಹರ್‌ ಲಾಲ್‌ ನೆಹರು ಅವರ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವವರಿಗೆ ಅದು ಎಲ್ಲಿ ಗೊತ್ತಾಗುತ್ತದೆ ಎಂದು ಹರಿಹಾಯ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರನ್ನು ಅತಂತ್ರ ಸ್ಥಿತಿಯಲ್ಲಿ ನಿಲ್ಲಿಸಿದ್ದೀರಿ. ಅವರನ್ನು ಮುಗಿಸಲಿಕ್ಕೆ ಶಕುನಿ ಮಾಮಾಗಳು ಸೃಷ್ಠಿಯಾಗಿದ್ದಾರೆ.

ಅಮಿತ್‌ ಶಾ, ಬಿ.ಎಲ್‌.ಸಂತೋಷ್‌, ಯಡಿಯೂರಪ್ಪ ಸೇರಿ ಬಹಳ ಶಕುನಿ ಮಾಮಾಗಳಿದ್ದಾರೆಂದು ಹೇಳಿದರು. ಮುಖ್ಯಮಂತ್ರಿಯಾಗಲು ಎಷ್ಟು ದಿನ ತೆಗೆದುಕೊಂಡಿರಿ, ಮಂತ್ರಿ ಮಂಡಲ ರಚನೆಗೆ ಎಷ್ಟು ದಿನ ಆಯ್ತು, ಸಚಿವರಿಗೆ ಖಾತೆ ಹಂಚಿಕೆಗೆ ಇನ್ನೆಷ್ಟು ದಿನ ಬೇಕು? ನಾಲ್ಕು-ಐದು ಡಿಸಿಎಂ ಮಾಡಲು ಹೊರಟಿದ್ದೀರಿ, ಆಪರೇಷನ್‌ ಕಮಲದಲ್ಲಿ ನಿಮ್ಮ ಕೈವಾಡವಿಲ್ಲ ಅಂದಿದ್ದರೆ ರಾಜೀನಾಮೆ ಕೊಟ್ಟವರಿಗೆ ಸಚಿವ ಸ್ಥಾನ ಖಾಲಿ ಇಟ್ಟಿದ್ದೇಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next