Advertisement

ಸಂತೆಕಟ್ಟೆ: ಸ್ಕೂಟರ್‌ಗೆ ಬೊಲೆರೋ ಢಿಕ್ಕಿ

01:20 AM Feb 15, 2023 | Team Udayavani |

ಉಡುಪಿ: ಪಡುತೋನ್ಸೆಯ ನಿವಾಸಿ ಅನ್ವರ್‌ ಹಾಗೂ ಅವರ ಪತ್ನಿ ನಾಝೀಮ ಬಾನು ಅವರು ಸ್ಕೂಟರ್‌ನಲ್ಲಿ ಸಂತೆಕಟ್ಟೆ ಪೆಟ್ರೋಲ್‌ ಬಂಕ್‌ ಎದುರುಗಡೆ ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆ ರಸ್ತೆಗೆ ತಿರುವು ಪಡೆಯುತ್ತಿರುವಾಗ ನಾಗೇಶ್‌ ಚಲಾಯಿಸುತ್ತಿದ್ದ ಬೊಲೆರೋ ಪಿಕಪ್‌ ವಾಹನ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.

Advertisement

ಪರಿಣಾಮ ಅನ್ವರ್‌, ನಾಝೀಮ ಅವರ ತಲೆ, ಕೈ, ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪಂಜಿಮಾರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಶಿರ್ವ: ವಿಪರೀತ ಕುಡಿತದ ಚಟ ಹೊಂದಿದ್ದ ಕೋಡು ಪಂಜಿಮಾರು ನಿವಾಸಿ ಪ್ರಕಾಶ್‌ ಬಂಗೇರ (57) ಅವರು ಪಂಜಿಮಾರು ಕಾಡಿನ ಬಳಿ ಮರದ ಕೊಂಬೆಗೆ ಫೆ. 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಅವರು ಕಾಡಿನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲಾ ಮಕ್ಕಳು ನೋಡಿ ಮಾಹಿತಿ ನೀಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಬೈಕ್‌ ಸವಾರ ಸಾವು
ಕೊಲ್ಲೂರು: ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ ಮೇಲ್‌ಜೆಡ್ಡು ಸಮೀಪ ಫೆ. 13ರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್‌ ಸವಾರ, ಹೊಸೂರಿನ ಹರ ನಿವಾಸಿ ರಾಘವೇಂದ್ರ ಅವರ ಪುತ್ರ ಪ್ರಜ್ವಲ್‌ ಶೆಟ್ಟಿ (25) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

Advertisement

ಚಿತ್ತೂರಿನಿಂದ ಜಡ್ಕಲ್‌ ಕಡೆಗೆ ಸಾಗುತ್ತಿದ್ದ ಪಿಕಪ್‌ ವಾಹನ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪ್ರಜ್ವಲ್‌ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next